ದಾವಣಗೆರೆ, ಫೆ. 20- ಮಹಾನಗರ ಪಾಲಿಕೆ ವತಿಯಿಂದ ವಾರ್ಡ್ ನಂಬರ್ 16ರ ವಿನೋಬನಗರದಲ್ಲಿ ಏರ್ಪಡಿಸಲಾಗಿದ್ದ ಮನೆ ಬಾಗಿಲಿಗೆ ಇ- ಸ್ವತ್ತು ಕಾರ್ಯಕ್ರಮವನ್ನು ಮಹಾನಗರ ಪಾಲಿಕೆ ಸದಸ್ಯರಾದ ಎ. ನಾಗರಾಜ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತರಾದ ರೇಣುಕಾ, ಉಪಆಯುಕ್ತರಾದ ಲಕ್ಷ್ಮಿ ಹಾಗೂ ವಲಯ ಆಯುಕ್ತರಾದ ನಾಗರಾಜ್, ಕಂದಾಯ ಅಧಿಕಾರಿಯಾದ ಈರಮ್ಮ, ಬಿಲ್ಕಲೆಕ್ಟರ್ ನಾಗರಾಜ್, ವಾರ್ಡ್ ಅಧ್ಯಕ್ಷ ಸುರೇಶ್, ಮುಖಂಡರಾದ ರವಿ, ಸತೀಶ್, ರಾಮಚಂದ್ರ ರಾಯ್ಕರ್, ಯೋಗೇಶ್, ಸೋಮಶೇಖರ್, ಚೌಡಪ್ಪ, ಶೇಖರ್, ಗೋಪಾಲ್ ಮುಂತಾದವರಿದ್ದರು.
ವಿನೋಬನಗರದಲ್ಲಿ ಇ ಸ್ವತ್ತು ವಿತರಣೆ
![21 vinobanagara e swattu 21.02.2024 ವಿನೋಬನಗರದಲ್ಲಿ ಇ ಸ್ವತ್ತು ವಿತರಣೆ](https://janathavani.com/wp-content/uploads/2024/02/21-vinobanagara-e-swattu-21.02.2024-860x521.jpg)