ದಾವಣಗೆರೆ, ಫೆ. 18- ನಗರದ ಪಿ.ಜೆ. ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಧ್ವ ನವಮಿ ಪ್ರಯುಕ್ತ ನೈರ್ಮಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳು ನಿನ್ನೆ ನಡೆದವು. ಪಂಡಿತ್ ಪುರಂದರಚಾರ್ ಹಯಗ್ರೀವ್ ಅವರಿಂದ ಮಧ್ವನವಮಿ ಪ್ರಯುಕ್ತ ಉಪನ್ಯಾಸ ನೀಡಿದರು. ನೆರೆದಿದ್ದ ಭಕ್ತರಿಗೆ ಫಲ, ಮಂತ್ರಾಕ್ಷತೆ ನೀಡಿದರು. ಬಡಾವಣೆಯ ಪ್ರಮುಖ ರಸ್ತೆಗಳಲ್ಲಿ ರಥೋತ್ಸವ. ನಂತರ ತೀರ್ಥಪ್ರಸಾದ ವ್ಯವಸ್ಥೆಯನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು.
ರಾಯರ ಮಠದ ವ್ಯವಸ್ಥಾಪಕ ತೀರ್ಥಣ್ಣನವರು, ರಾಮ್ ಗೋಪಾಲ್, ಶ್ಯಾಮ್, ಮುರುಳಿಧರ್, ರಾಮಚಂದ್ರರಾವ್, ಅಡುಗೆ ಗೋಪಿನಾಥ, ಭರಮಸಾಗರದ ಬಿ.ಜಿ. ಅನಂತಪದ್ಮನಾಭರಾವ್, ವೆಂಕಟೇಶ್ ನವರತ್ನ, ಅಶೋಕ್, ನಾಗಣ್ಣ, ಭಜನಾ ಮಂಡಳಿಯವರು ಮತ್ತಿತರರಿದ್ದರು.