ಪರೀಕ್ಷೆ ಭಯ ಬೇಡ: ಆದರ್ಶ ಗೋಖಲೆ

ಪರೀಕ್ಷೆ ಭಯ ಬೇಡ: ಆದರ್ಶ ಗೋಖಲೆ

ದಾವಣಗೆರೆ, ಫೆ. 18- ಪರೀಕ್ಷೆ ಎಂದರೆ ಭಯಪಡಬಾರದು. ಹಬ್ಬದಂತೆ ಸಂಭ್ರಮಾ ಚರಣೆ ಮಾಡಬೇಕು ಎಂದು ಉಪನ್ಯಾಸ ಕರು, ವಾಗ್ಮಿಗಳಾದ ಆದರ್ಶ ಗೋಖಲೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ನಗರದ ಸೋಮೇಶ್ವರ ವಿದ್ಯಾಲಯದಲ್ಲಿ `ಮಕ್ಕಳಲ್ಲಿ ಪರೀಕ್ಷೆ ಭಯ ಹೋಗಲಾಡಿಸಲು ಹಾಗೂ ಭವಿಷ್ಯದಲ್ಲಿ ಎದುರಾಗುವ ಸವಾಲುಗಳು, ಜವಾಬ್ದಾರಿ ಗಳ ನಿರ್ವಹಣೆ’ ಕುರಿತು ಮಾತನಾಡಿದರು.

10 ನೇ ತರಗತಿ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಹಾಗೂ ಸಲಹೆ ನೀಡುವ ಉದ್ದೇಶದಿಂದ ಈ ಉಪನ್ಯಾಸ ಏರ್ಪಡಿಸಲಾಗಿದ್ದು, ವಿದ್ಯಾರ್ಥಿಗಳು ಸಂಭ್ರಮದಿಂದ ಪರೀಕ್ಷೆ ಬರೆಯಬೇಕು. ದಿನವೊಂದಕ್ಕೆ 6 ವಿಷಯಗಳಿಂದ 6 ಪ್ರಶ್ನೆಗಳನ್ನು 12 ಬಾರಿ ನಿರಂತರ ಅಧ್ಯಯನ ಮಾಡಬೇಕು. ಕ್ರಮಬದ್ಧ ವ್ಯಾಯಾಮ ಹಾಗೂ ಯೋಗದಿಂದ ಏಕಾಗ್ರತೆಯನ್ನು ರೂಢಿಸಿಕೊಳ್ಳಿ, ಕೀಳರಿಮೆಯನ್ನು ತೊರೆದು ಸ್ವ ನಂಬಿಕೆ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.

ತನ್ಮೂಲಕ ಪೋಷಕರ, ಶಿಕ್ಷಕರ, ದೇಶದ ಋಣ ಸಂದಾಯಕ್ಕೆ ಸನ್ನದ್ಧರಾ ಬೇಕು. ಪರೀಕ್ಷೆ ನಂತರವೂ ಭಾರತದ ಸನಾ ತನ ಧರ್ಮ, ಸಂಸ್ಕೃತಿ, ಪರಂಪರೆಯನ್ನು ಅಧ್ಯಯನ ಮಾಡಿ ಅವುಗಳನ್ನು ಮುನ್ನಡೆ ಸಿಕೊಂಡು ಹೋಗುವ ಸತ್ಪ್ರಜೆಗಳಾಗಿ ಎಂದು ವಿದ್ಯಾರ್ಥಿಗಳಿಗೆ ಹಿತ ನುಡಿದರು.

ಈ ವೇಳೆ ಪ್ರಾಚಾರ್ಯರಾದ ಪ್ರಭಾವತಿ, ಆಡಳಿತಾಧಿಕಾರಿ ಹರೀಶ್ ಬಾಬು, ಮುಖ್ಯೋಪಾಧ್ಯಾಯರಾದ ಗಾಯತ್ರಿ, ಪ್ರಕಾಶ್, ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 

error: Content is protected !!