ದಾವಣಗೆರೆ, ಫೆ. 14- ತಾಲ್ಲೂಕಿನ ಎಲೆಬೇತೂರು ಗ್ರಾಮದಲ್ಲಿ ಶ್ರೀ ಮಾರಿಕಾಂಬ ದೇವಿಯ ದೇವಸ್ಥಾನ ಉದ್ಘಾಟನೆ ಮತ್ತು ಶ್ರೀ ದೇವಿಯ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣವು ವಿಜೃಂಭಣೆಯಿಂದ ಮೊನ್ನೆ ನಡೆಯಿತು.
ಶ್ರೀ ಮಾರಿಕಾಂಬ ದೇವಿಗೆ ರಾತ್ರಿ ಪ್ರಾಣ ಪ್ರತಿಷ್ಠಾಪನೆ, ಹೋಮ ಮುಂಜಾನೆ ಪಂಚಾಮೃತ ಅಭಿಷೇಕ, ಶ್ರೀದೇವಿಯ ಗರ್ಭಗುಡಿ ಪ್ರವೇಶ ಪ್ರತಿಷ್ಠಾಪನೆ ನಡೆದ ನಂತರ ಹೂವಿನ ಅಲಂಕಾರ, ಮಹಾಮಂಗಳಾರತಿ ಗೋಪುರಕ್ಕೆ ಕಳಸಾರೋಹಣದ ವಿಧಿ-ವಿಧಾನಗಳೊಂದಿಗೆ ನಡೆಯಿತು.