ಭರಮಸಾಗರ, ಫೆ.14- ಕೆನರಾ ಬ್ಯಾಂಕ್ನಲ್ಲಿ ಹಣ ಡ್ರಾ ಮಾಡಿಕೊಂಡು ಬೈಕಿನಲ್ಲಿಟ್ಟಿದ್ದ 2.15 ಲಕ್ಷ ರೂ. ಹಣ ಕಳ್ಳತನವಾದ ಘಟನೆ ನಡೆದಿದೆ. ಭರಮಸಾಗರ ಪೊಲೀಸ್ ಠಾಣೆ ಅಧಿಕಾರಿಗಳು ಕಳ್ಳತನ ನಡೆದ ಸ್ಥಳ ಪರಿಶೀಲಿಸಿದರು. ಈ ವೇಳೆ ಬ್ಯಾಂಕ್ ಮುಂಭಾಗ ಸಿಸಿಟಿವಿ ಅಳವಡಿಸದ ಬಗ್ಗೆ ಪತ್ರಕರ್ತರು ಅಸಮಾಧಾನ ವ್ಯಕ್ತಪಡಿಸಿದರು. ಭರಮಸಾಗರ ವೃತ್ತ ನಿರೀಕ್ಷಕ ನಿಂಗನ ಗೌಡ್ರು ಸ್ಥಳಕ್ಕೆ ಭೇಟಿ ನೀಡಿದಾಗ ಶೀಘ್ರವೇ ಕಳ್ಳರನ್ನು ಪತ್ತೆ ಹೆಚ್ಚುವಂತೆ ಪತ್ರಕರ್ತರು ಮನವಿ ಮಾಡಿದರು. ತನಿಖೆಗೆ ತಂಡ ರಚಿಸಿದ್ದು, ವಾರದೊಳಗೆ ಕಳ್ಳರನ್ನು ಪತ್ತೆ ಹಚ್ಚುವುದಾಗಿ ನಿಂಗನ ಗೌಡ್ರು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಅನಂತ ಪದ್ಮ ರಾವ್, ಮಂಜುನಾಥ್, ರಾಜಣ್ಣ, ಕರಿಬಸಪ್ಪ ಇತರರು ಉಪಸ್ಥಿತರಿದ್ದರು.
July 24, 2024