ಪಾಲಿಕೆಯಲ್ಲಿ ಗುಂಡು ತಗುಲಿ ಪೇದೆಯ ಆರೋಗ್ಯ ಸ್ಥಿತಿ ಗಂಭೀರ

ದಾವಣಗೆರೆ,  ಫೆ. 14- ಮಹಾನಗರ ಪಾಲಿಕೆಯಲ್ಲಿ ಇವಿಎಂ ಗಾರ್ಡ್ ಆಗಿ‌ ಕರ್ತವ್ಯ ನಿರ್ವಹಿಸುತ್ತಿದ್ದ ಪೇದೆಗೆ ಗುಂಡು ತಗುಲಿ ಗಾಯಗೊಂಡಿರುವ ಘಟನೆ  ಇಂದು ರಾತ್ರಿ 8.15 ರಿಂದ 8.30ರ ಸಮಯದಲ್ಲಿ‌ ನಡೆದಿದೆ‌. 

ಡಿಎಆರ್ 2011ರ ಬ್ಯಾಚ್‌ನ ಕಾನ್ಸ್ ಟೇಬಲ್ ಗುರುಮೂರ್ತಿಗೆ ಗುಂಡು ತಗುಲಿದ್ದು, ಇದು‌ ಆಕಸ್ಮಿಕವೋ ಅಥವಾ ಆತ್ಮಹತ್ಯೆಗೆ ಯತ್ನವೋ ಎಂಬುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ.  ಗುರುಮೂರ್ತಿ ಅವರ ಬಂದೂಕಿ ನಿಂದ ಗುಂಡು ‌ಹಾರಿದ್ದು, ಕೂಡಲೇ ಅಲ್ಲಿದ್ದವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

ಎಸ್ಪಿ‌ ಭೇಟಿ : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಉಮಾ ಪ್ರಶಾಂತ್ ಅವರು  ಆಸ್ಪತ್ರೆಗೆ ಭೇಟಿ ನೀಡಿ ಪೇದೆಯ ಆರೋಗ್ಯ ಸ್ಥಿತಿ ಪರಿಶೀಲಿಸಿದ್ದಾರೆ.

ಈ ವೇಳೆ‌ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಘಟನೆ ಆಕಸ್ಮಿಕವೋ ಅಥವಾ ಆತ್ಮಹತ್ಯೆಗೆ ಯತ್ನವೋ ಎಂಬ ಬಗ್ಗೆ ತಿಳಿದು ಬಂದಿಲ್ಲ. ಪೇದೆಯು ಪ್ರಜ್ಞಾಸ್ಥಿತಿಗೆ ಬಂದು ಮಾಹಿತಿ ನೀಡಿದ ನಂತರವೇ ಸತ್ಯ ತಿಳಿಯಲಿದೆ ಎಂದರು.

error: Content is protected !!