ಕರುಣಾ ಜೀವ ಕಲ್ಯಾಣ ಟ್ರಸ್ಟ್ ವತಿಯಿಂದ ಟ್ರಸ್ಟ್ ಸಭಾಂಗಣದಲ್ಲಿ ಇಂದು ಸಂಜೆ 6 ರಿಂದ 7.15 ರವರೆಗೆ `ಚಿಂತನೆ-ಸಂವಾದ’ ನಡೆಯಲಿದೆ.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ. ರಾಘವನ್ ಅವರು `ಬುದ್ಧನ ಕರುಣೆ, ಮೈತ್ರಿಯ ಚಿಂತನೆಗಳು’ ಕುರಿತು ಮಾತನಾಡಲಿದ್ದಾರೆ. ಶಿವನಕೆರೆ ಬಸವಲಿಂಗಪ್ಪ, ಪ್ರೊ.ಎಂ. ಬಸವರಾಜ್, ಎಸ್. ಗುರುಮೂರ್ತಿ, ಆರ್.ಆರ್. ಕುಸಗೂರು, ಮಲ್ಲಾಬಾದಿ ಬಸವರಾಜ್ ಭಾಗವಹಿಸಲಿದ್ದಾರೆ.