ರಾಣೇಬೆನ್ನೂರು, ಫೆ. 4 – ರಾಜ್ಯ, ಜಿಲ್ಲಾ ಮತ್ತು ಶಾಲಾ ಮಟ್ಟದಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಇಂದು ಇಲ್ಲಿನ ರಾಮಕೃಷ್ಣಾಶ್ರಮದಲ್ಲಿ ಶ್ರೀ ಪ್ರಕಾಶಾನಂದ ಮಹಾರಾಜ ಹಾಗೂ ಶ್ರೀ ಆತ್ಮದೀಪಾನಂದ ಮಹಾರಾಜರು ಗೌರವಿಸಿದರು.
ರೋಟರಿ ಶಾಲೆಯ ಡಾ. ಬಸವರಾಜ ಕೇಲಗಾರ, ಆಶ್ರಮದ ಡಾ. ಚಂದ್ರ ಶೇಖರ ಕೇಲಗಾರ, ರಾಜೇಶ್ವರಿ ಲದ್ವಾ, ರೇನಬೋ ಶಾಲೆಯ ಸಿ.ಟಿ.ಸುರೇಶ, ರಾಜರಾಜೇಶ್ವರಿಯ ಶಾಲೆಯ ವಿ.ಪಿ. ಲಿಂಗನಗೌಡ, ಸಬ್ ಇನ್ಸ್ ಫೆಕ್ಟರ್ ಗಡ್ಡೆಪ್ಪ ಗಂಜುಟಗಿ, ಶಿಕ್ಷಣಾಧಿಕಾರಿ ಎಂ.ಎಚ್. ಪಾಟೀಲ ಮತ್ತಿತರರಿದ್ದರು.