8ರಂದು ನಗರದಲ್ಲಿ ಪುರಂದರದಾಸರ ಆರಾಧನೆ

ದಾವಣಗೆರೆ, ಫೆ. 4 – ನಂದಕಿಶೋರ ಭಜನಾ ಮಂಡಳಿಯ 26ನೇ ವಾರ್ಷಿಕೋತ್ಸವ ಮತ್ತು ಶ್ರೀ ಪುರಂದರದಾಸರ ಆರಾಧನೆ ಪ್ರಯುಕ್ತ ಇದೇ ದಿನಾಂಕ 8 ರ ಗುರುವಾರ ಸಂಜೆ ಶ್ರೀ ಕೃಷ್ಣಾಚಾರ್ಯ ಮಣ್ಣೂರು ಅವರಿಂದ ಪ್ರವಚನ ಹಾಗೂ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. 

ಬರುವ ಮಾರ್ಚ್‌ ತಿಂಗಳಿನಲ್ಲಿ ನಡೆಯಲಿರುವ ಶ್ರೀ ರಾಘವೇಂದ್ರ ಸಪ್ತಾಹ ಕಾರ್ಯಕ್ರಮದ ನಿಮಿತ್ತವಾಗಿ ಶ್ರೀ ರಾಘವೇಂದ್ರ ಸ್ವಾಮಿಗಳವರ ಕುರಿತು ಜೀವನ ಚರಿತ್ರೆಯ ಬಗ್ಗೆ ಪ್ರಬಂಧ ಸ್ಪರ್ಧೆ ಹಾಗೂ ಶ್ರೀರಾಮರ ಸ್ತೋತ್ರ ಪಠಣ ಮತ್ತು ಶ್ರೀರಾಮರ ಚಿತ್ರ ಬಿಡಿಸುವ ನೃತ್ಯವನ್ನು  ಏರ್ಪಡಿಸಲಾಗಿದೆ.  ವಿವರಕ್ಕೆ ಸಂಪರ್ಕಿಸಿ : 9481040496, 99028 40575, 81057 91977.

error: Content is protected !!