ರಾಷ್ಟ್ರೀಯ ಕಬಡ್ಡಿ ಪಂದ್ಯಕ್ಕೆ ನಗರದ ಮಾಳಪ್ಪ ಆಯ್ಕೆ

ರಾಷ್ಟ್ರೀಯ ಕಬಡ್ಡಿ ಪಂದ್ಯಕ್ಕೆ ನಗರದ ಮಾಳಪ್ಪ ಆಯ್ಕೆ

ದಾವಣಗೆರೆ, ಫೆ.1- ಹೈದರಾ ಬಾದ್‌ನಲ್ಲಿ ದಿನಾಂಕ 1 ರಿಂದ 4 ರವರೆಗೆ ನಡೆಯುತ್ತಿರುವ 49ನೇ ಜ್ಯೂನಿಯರ್ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್ ಶಿಪ್‌ ಪಂದ್ಯಾವಳಿಗೆ ನಗರದ ವೆಂಕಟೇಶ್ವರ ತಂಡದ ಮಾಳಪ್ಪ ಅವರು ಆಯ್ಕೆಯಾಗಿರುತ್ತಾರೆ. ಮಾಳಪ್ಪ ಅವರಿಗೆ ಜಿಲ್ಲಾ ಅಮೆಚೂರು ಕಬಡ್ಡಿ ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿ, ಪದಾಧಿಕಾರಿಗಳು ಹಾಗೂ ವೆಂಕಟೇಶ್ವರ ತಂಡದ ತರಬೇತುದಾರ ರಾಜು, ಪುಟ್ಟ ರಾಜು ಹಾಗೂ ಕ್ರೀಡಾಪಟುಗಳು ಅಭಿನಂದಿಸಿದ್ದಾರೆ.

error: Content is protected !!