ಅಭಿವೃದ್ದಿಯಲ್ಲಿ ನಿರಂತರತೆ ಸರ್ಕಾರದ ಮೂಲಮಂತ್ರ : ಸಂಸದ ಸಿದ್ದೇಶ್ವರ

ಅಭಿವೃದ್ದಿಯಲ್ಲಿ ನಿರಂತರತೆ ಸರ್ಕಾರದ ಮೂಲಮಂತ್ರ : ಸಂಸದ ಸಿದ್ದೇಶ್ವರ

ಅಭಿವೃದ್ದಿಯಲ್ಲಿ ನಿರಂತರತೆಯನ್ನು ಕಾಪಾಡಿಕೊಂಡು ಅಭಿವೃದ್ದಿ ಹೊಂದಿದ ಭಾರತವನ್ನಾಗಿ ಮಾಡುವಲ್ಲಿ ಇಂದು ಆರ್ಥಿಕ ಸಚಿವರು ಮಂಡಿಸಿದ ಮಧ್ಯಂತರ ಬಜೆಟ್ ಭದ್ರವಾದ ಅಡಿಪಾಯವನ್ನು ಹಾಕಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದ್ದಾರೆ. 2047 ರ ಹೊತ್ತಿಗೆ ವಿಶ್ವದ ಬಲಿಷ್ಟ ರಾಷ್ಟ್ರಗಳಲ್ಲಿ ಭಾರತವೂ ಕೂಡ ಅಗ್ರಸ್ಥಾನದಲ್ಲಿ ನಿಲ್ಲಲಿದೆ, ಅದಕ್ಕೆ ಬೇಕಾದ ಬುನಾದಿಯನ್ನು ಈ ಮೂಲಕ ಹಾಕಲಾಗಿದೆ. 

ಒಟ್ಟಾರೆಯಾಗಿ ಬಡವರು ಮತ್ತು ಮಧ್ಯಮ ವರ್ಗದವರನ್ನೇ ಪ್ರಥಮ ಆದ್ಯತೆಯನ್ನಾಗಿಸಿಕೊಂಡು ಮೂಲಸೌಲಭ್ಯ, ಪ್ರವಾಸೋದ್ಯಮ, ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ ನವೋದ್ಯಮಗಳಿಗೆ ಉತ್ತೇಜನ ನೀಡುವ ಮೂಲಕ ಸರ್ಕಾರ ಸರ್ವಾಂಗೀಣ ಅಭಿವೃದ್ದಿಗೆ ಸಂಕಲ್ಪ ಮಾಡಿದೆ ಎಂದವರು ಹೇಳಿದರು.

error: Content is protected !!