ಗುಣ ಸಂಪನ್ನರಿಗಿಂತ ಗುಣಹೀನರೇ ಸದ್ದು ಮಾಡುತ್ತಿದ್ದಾರೆ

ಗುಣ ಸಂಪನ್ನರಿಗಿಂತ ಗುಣಹೀನರೇ ಸದ್ದು ಮಾಡುತ್ತಿದ್ದಾರೆ

ಹರಪನಹಳ್ಳಿಯಲ್ಲಿ ನೀಲಗುಂದ ವಿರಕ್ತಮಠದ ಶ್ರೀ ಚನ್ನಬಸವ ಶಿವಯೋಗಿ ಸ್ವಾಮೀಜಿ

ಹರಪನಹಳ್ಳಿ, ಜ.29- ಸಮಾಜದಲ್ಲಿ ಗುಣ ಸಂಪನ್ನರಿಗಿಂತ  ಗುಣಹೀನರೇ ಹೆಚ್ಚು ಸದ್ದು ಮಾಡುತ್ತಿದ್ದು, ವಿದ್ಯಾರ್ಥಿಗಳು ಹಾಗೂ ಪೋಷಕರು ಜಾಗರೂಕರಾಗಿರಬೇಕು ಎಂದು ನೀಲಗುಂದ ಗುಡ್ಡದ ವಿರಕ್ತ ಮಠದ ಶ್ರೀ ಚನ್ನಬಸವ ಶಿವಯೋಗಿ ಸ್ವಾಮೀಜಿ  ಹೇಳಿದರು.

ಪಟ್ಟಣದ ನಿಸರ್ಗ ಪದವಿ ಪೂರ್ವ  ಕಾಲೇಜು ಎನ್.ಎಸ್.ಎಸ್ ಘಟಕ  ಹಾಗೂ ಬುದ್ದ ಬಸವ ಅಂಬೇಡ್ಕರ್ ವಿಶ್ವಕಲ್ಯಾಣ  ಸಂಸ್ಥೆಯ ಹೇಮರೆಡ್ಡಿ ಮಲ್ಲಮ್ಮ ಐ.ಟಿ.ಐ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ  2023-24 ಸಾಲಿನ  ವಾರ್ಷಿಕೋತ್ಸವ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಅನುಭವ, ಛಲ, ಸತತ ಪ್ರಯತ್ನಗಳ ಮೂಲಕ ಗುರಿಯನ್ನು ಸಾಧಿಸಬಹುದು. ಅವಮಾನ, ಅನುಮಾನ, ಸಮ್ಮಾನಗಳಿಲ್ಲದೆ ಸಾಧನೆ ಸಾಧ್ಯವಿಲ್ಲ. ಜೀವನ ಪ್ರೀತಿಯಿಂದ ಅಂತರಂಗ ಗಟ್ಟಿಗೊಳ್ಳುತ್ತದೆ ಎಂದರು. 

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅಂಜಿನಪ್ಪ  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜೀವನದಲ್ಲಿ ಗುರಿ ಸ್ಪಷ್ಟವಿದ್ದು, ಸರಿದಾರಿಯಲ್ಲಿ ಹೋದಾಗ ಮಾತ್ರ ಬದುಕಿಗೆ ಒಂದು ಅರ್ಥ ಬರುತ್ತದೆ. ನಾವು ಯಾವ ಕೆಲಸವನ್ನು ಮಾಡಿದರೂ ಅದಕ್ಕೆ ಪ್ರಯತ್ನ ಮುಖ್ಯ. ಆಗ ಮಾತ್ರ ಯಶಸ್ಸು ಲಭಿಸುತ್ತದೆ. ಮನಸ್ಸಿನ ಧೀಶಕ್ತಿಯನ್ನು ಎಂದಿಗೂ ತ್ಯಜಿಸಬಾರದು. ಒದಗಿಬರುವ ಅವಕಾಶಗಳನ್ನು ಕೈಬಿಡಬಾರದು. ಜೀವನದಲ್ಲಿ ಗುರಿ ಸ್ಪಷ್ಟವಿದ್ದು, ಸರಿದಾರಿಯಲ್ಲಿ ಸಾಗಿದಾಗ ಬದುಕಿಗೆ ಅರ್ಥ ಬರುತ್ತದೆ. ಯಾವ ಕೆಲಸವನ್ನು ಮಾಡಿದರೂ ಅದಕ್ಕೆ ಪ್ರಯತ್ನ ಮತ್ತು ಆತ್ಮವಿಶ್ವಾಸ ಮುಖ್ಯ. ಆಗ ಮಾತ್ರ ಯಶಸ್ಸು ಲಭಿಸುತ್ತದೆ ಎಂದರು.

ಶ್ರೀ ಶರಣ ಬಸವ ಬುದ್ದ ಭೀಮಜೀ  ವಿದ್ಯಾಸಂಸ್ಥೆಯ  ಕಾರ್ಯದರ್ಶಿ ಗುಂಡಗತ್ತಿ ಕೊಟ್ರಪ್ಪ ಸಮಾರಂಭದ  ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಮುಖ್ಯ. ಹೆಚ್ಚು ಜ್ಞಾನ ಸಂಪಾದಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಜೀವನದ ಯಶಸ್ಸಿಗಾಗಿ ಉತ್ತಮ ಶಿಕ್ಷಣ ಪಡೆಯಬೇಕು  ನಿರಂತರವಾದ ಪ್ರಯತ್ನ, ಪರಿಶ್ರಮ ಮತ್ತು ಛಲದ ಮೂಲಕ ಉದ್ದೇಶಿತ ಸಾಧನೆಯನ್ನು ಮಾಡಲು ಸಾಧ್ಯ ಎಂದರು.

ಕೆ.ಎಸ್.ಆರ್.ಟಿ.ಸಿ ಡಿಪೋ ಮ್ಯಾನೇಜರ್ ಮಂಜುಳಾ ಎಂ., ಸಾಹಿತಿ ಡಿ.ರಾಮನಮಲಿ, ಪುರಸಭೆ ಸದಸ್ಯ ಡಿ.ಅಬ್ದುಲ್ ರಹಿಮಾನ್ ಸಾಬ್ ಮಾತನಾಡಿದರು.

ಇದೇ ವೇಳೆ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ  ಕೆ.ಆರ್ ಸುದೀಪ್ ಹಾಗೂ  ಪೊಲೀಸ್ ಇಲಾಖೆಯ  ಅಪರಾಧ ತನಿಖಾಧಿಕಾರಿಯಾಗಿ ನೂತನವಾಗಿ ಆಯ್ಕೆಯಾದ  ಡಾ.ಕೆ.ಯರಿಸ್ವಾಮಿ ಮತ್ತು  ದೇಶೀ ತಳಿಗಳಾದ ಗಿರ್ ಹಸುಗಳ ಉತ್ಪನ್ನ ಗಳಿಂದ  ರೈತರಿಗಾಗಿ  ಜೈವಿಕ ಔಷಧಿಗಳನ್ನು ತಯಾರಿಸಿದ ರಾಜು ಎಲಿಗಾರ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ   ಪುರಸಭೆ ಸದಸ್ಯರಾದ ಟಿ.ವೆಂಕಟೇಶ್‌,  ಗೊಂಗಡಿ ನಾಗರಾಜ್‌, ಲಾಟಿ ದಾದಾಪೀರ್, ಟಿಎಪಿಸಿಎಂಸ್  ನಿರ್ದೇಶಕ ಚಿಕ್ಕೇರಿ ಬಸಪ್ಪ, ಮುಖಂಡರಾದ ವಿ.ಸಣ್ಣಅಜ್ಜಯ್ಯ, ಸಾಹಿತಿ ಇಸ್ಮಾಯಿಲ್ ಎಲಿಗಾರ್, ಸಂಸ್ಥೆಯ ಸಂಸ್ಥಾಪಕ  ಕಾರ್ಯದರ್ಶಿ ಕೊಟ್ರಮ್ಮ ಕೊಟ್ರಪ್ಪ, ಪ್ರಾಂಶುಪಾಲ ಆರ್.ಎಚ್.ಕಲ್ಯಾಣದವರ್, ಉಪನ್ಯಾಸಕರಾದ ಶಾಂತಕುಮಾರ್.ಬಿ.,  ಎ.ಮಂಜುನಾಥ್‌. ಜಿ.ವೆಂಕಟೇಶ್, ಹೆಚ್.ಮೊಹನ್, ಪಿ.ಬಿ.ಸಾಗರ್ ಸೇರಿದಂತೆ, ಇತರರು ಇದ್ದರು.

error: Content is protected !!