ಕಂಚಿಕೆರೆ ಬಿದ್ದ ಹನುಮಪ್ಪನಮಟ್ಟಿಯಲ್ಲಿ ರಾಮನಿಗೆ ಕ್ಷೀರಾಭಿಷೇಕ

ಕಂಚಿಕೆರೆ ಬಿದ್ದ ಹನುಮಪ್ಪನಮಟ್ಟಿಯಲ್ಲಿ  ರಾಮನಿಗೆ ಕ್ಷೀರಾಭಿಷೇಕ

ದಾವಣಗೆರೆ, ಜ.25- ಕಂಚೀಕೆರೆ ಗ್ರಾಮದ ಶ್ರೀಕ್ಷೇತ್ರ ಬಿದ್ದ ಹನುಮಪ್ಪನಮಟ್ಟಿ ಶ್ರೀ ವೀರಾಂಜನೇಯ ದೇವಸ್ಥಾನದಲ್ಲಿ  ಶ್ರೀ ಬಸವರಾಜ ಗುರೂಜಿಯವರಿಂದ  ಕಂಚಿಕೆರೆ ಗ್ರಾಮದ ಗುರು-ಹಿರಿಯರೊಂದಿಗೆ ಶ್ರೀರಾಮನ ಧ್ವಜಾರೋಹಣ ನೆರವೇರಿತು.

 ನಂತರ ಶ್ರೀರಾಮನಿಗೆ ಕ್ಷೀರಾಭಿಷೇಕ, ಹೂವಿನ ಅಲಂಕಾರ, ಅಯೋಧ್ಯೆಯ ಶ್ರೀರಾಮನ  ಚಿತ್ರಗಳಿಗೆ, ತೆಂಗಿನ ಗರಿಗಳಿಂದ ಸಿಂಗರಿಸಿ  ಪೂಜೆ ಸಲ್ಲಿಸಲಾಯಿತು ಮತ್ತು ಕಂಚೀಕೆರೆಯ ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿ ಸಂಘದವರಿಂದ ಶ್ರೀರಾಮನ ಭಜನೆಯು ಪೂಜ್ಯ ಶ್ರೀ ಬಸವರಾಜ ಗುರೂಜಿಯವರ ಕುರಿತು ಭಜನೆ ಮಾಡಲಾಯಿತು. 

ಈ ಸಮಯದಲ್ಲಿ ಕಂಚಿಕೆರೆ ಗ್ರಾಮದ ಭಜರಂಗದಳದವರು  ಬೈಕ್ ರಾಲಿ  ನಡೆಸಿದರು.

ಕಾರ್ಯಕ್ರಮದಲ್ಲಿ ಮಹಾದೇವಮ್ಮ ಮಲ್ಲಿಕಾರ್ಜುನಪ್ಪ, ಸಂಗಪ್ಪ ತೋಟದ, ಪ್ರಕಾಶ್ ಬಿನ್ ಮಹಾದೇವಪ್ಪ, ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿ ಕಂಚೀಕೆರೆ, ರಾಜ ಮಲ್ಲಿಕಾರ್ಜುನಪ್ಪ, ಮಹೇಶಪ್ಪ ಗಂಗನಕಟ್ಟೆ, ಬಿ. ಸಂತೋಷ್‍ಕುಮಾರ್, ಎಂ. ವಿ. ಮಂಜುನಾಥ್, ಎಂ. ಬಿ. ನಾಗರಾಜ್, ಬಿ. ಗೀತಾ, ಎಂ. ಉದಯಕುಮಾರ್, ಸುಧಾ, ಧರಣೇಂದ್ರ, ತರಕಾರಿ ಕೊಟ್ರೇಶಪ್ಪ  ,   ಷಣ್ಮುಖಪ್ಪ ಗೌಡ್ರು, ಎಸ್. ಎಂ. ಪ್ರಕಾಶ್,  ಟಿ. ಎಸ್. ಪ್ರಭಾಕರ್, ಗೌಡ್ರು ರಾಘವೇಂದ್ರ, ವೀರಣ್ಣ ಉಪನ್ಯಾಸಕರು, ಸಂತೋಷ್ ಹಾಲುವರ್ತಿ ಹಾಗೂ ಕಂಚಿಕೆರೆ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.

error: Content is protected !!