ಖಮೀತ್ಕರ್‌ ಶ್ರೀ ರಾಮದೇವಸ್ಥಾನದಲ್ಲಿ ಯೋಗ – ಧಾರ್ಮಿಕ ಪಠಣ

ಖಮೀತ್ಕರ್‌ ಶ್ರೀ ರಾಮದೇವಸ್ಥಾನದಲ್ಲಿ ಯೋಗ – ಧಾರ್ಮಿಕ ಪಠಣ

ದಾವಣಗೆರೆ, ಜ. 22 – ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಕರ್ನಾಟಕ ವೇದಾವತಿ ವಲಯ, (ದಾವಣಗೆರೆ) ವತಿಯಿಂದ ನಗರದ ಪಿ.ಜೆ. ಬಡಾವಣೆಯ ಖಮಿತ್ಕರ್ ಶ್ರೀ ರಾಮ ದೇವಸ್ಥಾನದ ಆವರಣದಲ್ಲಿ ಸಾಮೂಹಿಕವಾಗಿ ಯೋಗ ಬಂಧುಗಳಿಂದ ಅಗ್ನಿಹೋತ್ರ, ಹನುಮಾನ್ ನಮಸ್ಕಾರ, ಸೂರ್ಯ ನಮಸ್ಕಾರ, ವಿಷ್ಣು ನಮಸ್ಕಾರ ಹಾಗೂ ರಾಮ ತಾರಕ ಪಠಣ, ವಿಷ್ಣು ಸಹಸ್ರ ನಾಮ ಪಠಣ ಹಾಗೂ ಹನುಮಾನ್ ಚಾಲೀಸ ಪಠಣ ಕಾರ್ಯಕ್ರಮಗಳನ್ನು ಆಚರಿಸಲಾಯಿತು.

ಕಾರ್ಯಕ್ರಮವನ್ನು ಸಮಿತಿಯ ಜಿಲ್ಲಾ ಸಂಚಾಲಕ ಟಿವಿವಿ ಸತ್ಯನಾರಾಯಣ, ಜಿಲ್ಲಾ ಸಂಘಟನಾ ಪ್ರಮುಖರಾದ ವೀರಭದ್ರಪ್ಪ ನೇತೃತ್ವ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶ್ರೀ ರಾಮ ದೇವಸ್ಥಾನದ ವಹಿವಾಟುದಾರರಾದ ಖಮಿತ್ಕರ್ ರಾಜಾರಾಮ್ ಹಾಗೂ ಖಮಿತ್ಕರ್ ಜಯರಾಮ್ ಉಪಸ್ಥಿತರಿದ್ದರು.

error: Content is protected !!