ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆಯಿಂದ ರಾಮಪೂಜೆ

ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆಯಿಂದ ರಾಮಪೂಜೆ

ದಾವಣಗೆರೆ, ಜ. 22 – ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಆಶ್ರಯದಲ್ಲಿ  ನಗರದ ಎನ್.ಆರ್. ರಸ್ತೆಯ ಗ್ಲಾಸ್ ಬಿಲ್ಡಿಂಗ್ ಬಳಿ  ಸುತ್ತಮುತ್ತಲಿನ ವರ್ತಕರು, ನಿವಾಸಿಗಳು, ಆಟೋ ಚಾಲಕರು, ಗೂಡ್ಸ್ ಆಟೋ ಚಾಲಕರು ಹಾಗೂ ಹಣ್ಣು, ತರಕಾರಿ ವರ್ತಕರು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ, ಶ್ರೀರಾಮನ ಪೂಜೆ ನೆರವೇರಿಸಿ ನಂತರ ಅನ್ನ ಸಂತರ್ಪಣೆ ನಡೆಸಿದರು.

ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ  ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷರು ಹಾಗೂ ಮಲ್ನಾಡವಾಣಿ ಸಂಪಾದಕ ಕೆ.ಏಕಾಂತಪ್ಪ ಚಾಲನೆ ನೀಡಿದರು. ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಅವಿನಾಶ್, ಮಹಿಳಾ ಘಟಕದ ಅಧ್ಯಕ್ಷೆ ಮಾಲಾ ನಾಗರಾಜ, ಜಿಲ್ಲಾಧ್ಯಕ್ಷ ಜಗದೀಶ್, ಶರಣಪ್ಪ ಅಂಬಾರಿ, ಹುಲಿಕುಂಟೇಶ್ವರ, ರಾಘವೇಂದ್ರ ಡಿಜೆ, ಸಂಜೀವ್, ಎಸ್ ಗಣೇಶ್ , ಅರುಣಾಚಲ ಶೆಟ್ರು, ಬಸಪ್ಪ, ಸುನಿಲ್, ಸತೀಶ್ ಕುಮಾರ್, ರಾಜಣ್ಣ, ವೆಂಕಟೇಶ, ಸುಬ್ರಮಣ್ಯ, ನೇತ್ರಾವತಿ, ನಿಂಗಣ್ಣ ಇತರರು ಉಪಸ್ಥಿತರಿದ್ದರು.

error: Content is protected !!