ಕೆ.ಎನ್‌. ಹಳ್ಳಿಯಲ್ಲಿ ಶ್ರೀರಾಮನ ಉತ್ಸವ

ಕೆ.ಎನ್‌. ಹಳ್ಳಿಯಲ್ಲಿ ಶ್ರೀರಾಮನ ಉತ್ಸವ

ಮಲೇಬೆನ್ನೂರು, ಜ.22- ಕಡರನಾಯ್ಕನಹಳ್ಳಿ ಗ್ರಾಮದಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆ ಅಂಗವಾಗಿ ಶ್ರೀರಾಮನ ಭಾವಚಿತ್ರದ ಮೆರವಣಿಗೆಯನ್ನು ವೈಭವದೊಂದಿಗೆ ಮಾಡಲಾಯಿತು. ನೂರಾರು ಮಹಿಳೆಯರು ಪೂರ್ಣಕುಂಭ ಹೊತ್ತು ಮೆರವಣಿಗೆಗೆ ಮೆರಗುತಂದರು.

ಗ್ರಾಮದ ಶ್ರೀರಾಮ ಮಂದಿರ ವಿಶೇಷ ಪೂಜೆ, ಅನ್ನ ಸಂರ್ಪಣೆ ನಡೆಯಿತು. ಶಾಸಕ ಬಿ.ಪಿ. ಹರೀಶ್‌, ಕಾಂಗ್ರೆಸ್‌ ಮುಖಂಡ ನಂದಿಗಾವಿ ಶ್ರೀನಿವಾಸ್‌, ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್‌, ಚಂದ್ರಶೇಖರ್‌ ಪೂಜಾರ್‌ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.

error: Content is protected !!