ಹರಿಹರ, ಜ.19- ನಗರದಲ್ಲಿ ಲಾರಿ ಚಾಲಕರು ತಮ್ಮ ಹಲವಾರು ಬೇಡಿಕೆಗಳನ್ನು ಸರ್ಕಾರ ಆದಷ್ಟು ಬೇಗ ಈಡೇರಿಸುವಂತೆ ಆಗ್ರಹಿಸಿ ಲಾರಿ, ಗೂಡ್ಸ್ ವಾಹನ ಸೇರಿದಂತೆ ಹಲವು ವಾಹನಗಳ ಮೆರವಣಿಗೆ ಮೂಲಕ ತಹಶೀಲ್ದಾರ್ ಕಚೇರಿಗೆ ತೆರಳಿ ತಹಶೀಲ್ದಾರ್ ಬಸವರಾಜಯ್ಯ ಅವರಿಗೆ ಮನವಿ ಅರ್ಪಿಸಿದರು. ಈ ವೇಳೆ ಲಾರಿ ಚಾಲಕರ ಸಂಘದ ಅಧ್ಯಕ್ಷ ಯೂಸುಫ್ ಮಾತನಾಡಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಜಂಬಯ್ಯ, ಬಸಪ್ಪ, ಇಮ್ರಾನ್, ಜಪಾನ್ ರಫೀಕ್ ಸಾಬ್, ಹಿದಾಯತ್, ಸಲ್ಮಾನ್, ವಾಸು ಪಾಂಡು, ಅಬ್ದುಲ್ ಗಫೂರ್, ಮಾರುತಿ, ರಾಜೇಶ್ ಅಮರಾವತಿ, ಶಶಿನಾಯ್ಕ್, ರಿಜ್ವಾನ್, ಪರಶುರಾಮ್, ಪವನ್ ಕುಮಾರ್, ಫೈಯಾಜ್ ಆಹ್ಮದ್, ಖಲೀಲ್ ಸಾಬ್, ಜಿಯಾವುಲ್ಲಾ, ಇಮ್ರಾನ್ ಕೆ, ಇಂತಿಯಾಜ್, ಅಶ್ಪಾಕ್, ಮೆಹಬೂಬ್ ಸಾಬ್, ಫಕೃದ್ದೀನ್ ಇತರರು ಹಾಜರಿದ್ದರು.