ಮಲೇಬೆನ್ನೂರಿನಲ್ಲಿ ಗಮನ ಸೆಳೆದ ಆರ್ಐಎಫ್ ಸೇನೆಯ ಪಥ ಸಂಚಲನ

ಮಲೇಬೆನ್ನೂರಿನಲ್ಲಿ ಗಮನ ಸೆಳೆದ ಆರ್ಐಎಫ್ ಸೇನೆಯ ಪಥ ಸಂಚಲನ

ಮಲೇಬೆನ್ನೂರು, ಜ.18- ಆಯೋಧ್ಯೆಯಲ್ಲಿ ಇದೇ ದಿನಾಂಕ 22ರಂದು ಶ್ರೀರಾಮ ಮಂದಿರ ಉದ್ಘಾಟನೆ ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಶಾಂತಿ-ಸುವ್ಯವಸ್ಥೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಆರ್ಐಎಫ್ ಸೇನೆ ಪಥಸಂಚಲನ ನಡೆಸಿತು.

ಸೇನೆಯ ಕಮಾಂಡರ್ ಸುನೀಲ್‌ಕುಮಾರ್ ನೇತೃತ್ವದಲ್ಲಿ 150 ಕ್ಕೂ ಹೆಚ್ಚು ರಾಪಿಡ್ ಆಕ್ಷನ್ ಫೋರ್ಸ್ ಸಿಬ್ಬಂದಿಗಳು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪಥಸಂಚಲನ ನಡೆಸಿ ಗಮನ ಸೆಳೆದರು.

ಈ ವೇಳೆ ಪುರಸಭೆ ಸದಸ್ಯರಾದ ಸಾಬೀರ್ ಅಲಿ, ದಾದಾಪೀರ್, ನಯಾಜ್, ಖಲೀಲ್ ಅವರು ಸೇನೆಯ ಕಮಾಂಡರ್ ಸುನಿಲ್ ಕುಮಾರ್ ಅವರನ್ನು ಪಟ್ಟಣದ ಜನತೆಯ ಪರವಾಗಿ ಶಾಲು, ಹಾರ ಹಾಕಿ ಗೌರವಿಸಿದರು. ಮಲೇಬೆನ್ನೂರು ಪೊಲೀಸ್ ಠಾಣೆಯ ಪಿಎಸ್ಐ -2 ಪ್ರವೀಣ್‌ ಓಲೇಕಾರ್ ಹಾಗೂ ಸಿಬ್ಬಂದಿ ವರ್ಗದವರೂ ಪಥ ಸಂಚಲನಕ್ಕೆ ಸಾಥ್ ನೀಡಿದರು.

error: Content is protected !!