ದಾವಣಗೆರೆ, ಜ. 18- ನಗರದ ಗುಂಡಾಲ್ ಸಂಸ್ಥೆಗೆ ಗುರುವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಅವರು, ಮತದಾರರ ಪಟ್ಟಿ ಮುದ್ರಣಾ ಕಾರ್ಯವನ್ನು ಪರಿಶೀಲಿಸಿದರು. ಈ ಸಂಸ್ಥೆಯು ಬೂತ್ ಮಟ್ಟದಲ್ಲಿ ಪರಿಷ್ಕರಿಸಲ್ಪಟ್ಟ ಮತದಾರರ ಪಟ್ಟಿಯನ್ನು ಮುದ್ರಿಸಿ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸುತ್ತಿದೆ. ಸಂಸ್ಥೆಯ ಮುಖ್ಯಸ್ಥ ಮಂಜುನಾಥ್ ಗುಂಡಾಲ್ ಸೇರಿದಂತೆ ಚುನಾವಣಾ ಅಧಿಕಾರಿಗಳು, ಸಂಸ್ಥೆಯ ಸಿಬ್ಬಂದಿಗಳು ಈ ವೇಳೆ ಉಪಸ್ಥಿತರಿದ್ದರು.
ಮತದಾರರ ಪಟ್ಟಿ ಮುದ್ರಣಾ ಕಾರ್ಯ ಪರಿಶೀಲಿಸಿದ ಡಿಸಿ ವೆಂಕಟೇಶ್
![11 matadarara patti 19.01.2024 ಮತದಾರರ ಪಟ್ಟಿ ಮುದ್ರಣಾ ಕಾರ್ಯ ಪರಿಶೀಲಿಸಿದ ಡಿಸಿ ವೆಂಕಟೇಶ್](https://janathavani.com/wp-content/uploads/2024/01/11-matadarara-patti-19.01.2024-860x442.jpg)