ಶಾಲೆ – ಪೋಷಕ – ಶಿಕ್ಷಕ ತ್ರಿಭುಜಗಳು ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾದಿ

ಶಾಲೆ – ಪೋಷಕ – ಶಿಕ್ಷಕ ತ್ರಿಭುಜಗಳು ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾದಿ

ದಾವಣಗೆರೆ, ಜ.18- ನಗರದ ಶ್ರೀ ಶಾರದಾ ಐಐಟಿ ಮೆಡಿಕಲ್ ಅಕಾಡೆಮಿ, ರಾಘವೇಂದ್ರ ಹೈಟೆಕ್ ಪಿಯು ಕಾಲೇಜಿನಲ್ಲಿ ಶಾರದೋತ್ಸವ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಎಸ್. ಎಸ್  ಮೆಡಿಕಲ್ ಕಾಲೇಜಿನ   ಡಾ. ಶಶಿಕಲಾ ಕೃಷ್ಣಮೂರ್ತಿ ಅವರು ಮಾತನಾಡಿ, ಶಾಲೆ, ಪೋಷಕ, ಶಿಕ್ಷಕರು, ವಿದ್ಯಾರ್ಥಿಗಳ ಭವಿಷ್ಯದ ಬುನಾದಿಗಳಿದ್ದಂತೆ. ಇಂದಿನ ಮಕ್ಕಳು ಶಿಸ್ತಿನಿಂದ ತಮ್ಮ ಶಿಕ್ಷಣದ ಅಭ್ಯಾಸ ಮಾಡಬೇಕೆಂದು ಹೇಳಿದರು.  

ಕಾರ್ಯಕ್ರಮದಲ್ಲಿ ರೈತರಾದ ಹಾಲುವರ್ತಿ ದ್ಯಾಮಪ್ಪ ಹಾಗೂ ಯೋಧರಾದ ಬಿಳಿಚೊಡು ವೀರಭದ್ರಪ್ಪ ಅವರನ್ನು ಸನ್ಮಾನಿಸಲಾಯಿತು, ಹಾಗೂ 2022-23 ನೇ ಸಾಲಿನ ದ್ವಿತೀಯ ಪಿಯುಸಿ ನೀಟ್ ಹಾಗೂ ಜೆಇಇ  ಪರೀಕ್ಷೆಗಳಲ್ಲಿ ಉತ್ತಮ  ಸ್ಥಾನ ಪಡೆದ   ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.

  ಡಾ. ಅನಿಲ್ ಕುಮಾರ್ ಶ್ಯಾಗಲೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 

error: Content is protected !!