ಹರಿಹರದಲ್ಲಿ 21ರಂದು ಜಿಲ್ಲಾ ಮಟ್ಟದ ಕವಿಗೋಷ್ಠಿ

ಹರಿಹರ, ಡಿ.16- ನಗರದ ಶ್ರೀ ಕಾಳಿದಾಸ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಚಿಂತನ ಪ್ರತಿಷ್ಠಾನ, ಹರಿಹರ ಕವಿ ಬಳಗ ಮತ್ತು ಶ್ರೀ ಕಾಳಿದಾಸ ವಿದ್ಯಾಸಂಸ್ಥೆಯ ಸಹಯೋಗದಲ್ಲಿ ಇದೇ ದಿನಾಂಕ 21ರ ಭಾನುವಾರ ಬೆಳಿಗ್ಗೆ 10.30ಕ್ಕೆ ಜಿಲ್ಲಾಮಟ್ಟದ ಕವಿಗೋಷ್ಠಿ ಮತ್ತು ಸಾಹಿತಿ ಹೆಚ್.ಕೆ.ಕೊಟ್ರಪ್ಪನವರ ಅವ್ವ ಹಚ್ಚಿದ ದೀಪ ಕವನ ಸಂಕಲನದ ಕೃತಿ ಅವಲೋಕನ ನಡೆಯಲಿದೆ. ಡಾ.ಡಿ.ಫ್ರಾನ್ಸಿಸ್ ಅವರು ಕವನ ಸಂಕಲನದ ಅವಲೋಕನ ಮಾಡುವರು.

ನಂತರ ಜಿಲ್ಲಾ ಮಟ್ಟದ ಕವಿಗೋಷ್ಠಿ ನಡೆಯಲಿದೆ. ಕವಿಗಳು ಅಭಿವೃದ್ಧಿಯತ್ತ ಭಾರತ ಎಂಬ ವಿಷಯ ಕುರಿತು ಸ್ವರಚಿತ ಕವಿತೆ ವಾಚಿಸಬೇಕು. ಕವಿಗೋಷ್ಠಿಯಲ್ಲಿ ಭಾಗವಹಿಸುವ ಕವಿಗಳು ಸುಬ್ರಹ್ಮಣ್ಯ ನಾಡಿಗೇರ್ ಅಧ್ಯಕ್ಷರು ಚಿಂತನ ಪ್ರತಿಷ್ಠಾನ ಮೊ : 9242046726 ಮತ್ತು ಡಾ.ಡಿ.ಫ್ರಾನ್ಸಿಸ್ ಸಂಚಾಲಕರು, ಹರಿಹರ ಕವಿ ಬಳಗ ಮೊ : 9731395908 ಇವರನ್ನು ಇದೇ ದಿನಾಂಕ  19 ರೊಳಗೆ ಸಂಪರ್ಕಿಸಿ ಹೆಸರು ನೋಂದಾಯಿಸಬಹುದು. 

error: Content is protected !!