ಹರಿಹರ : ಅಯೋಧ್ಯೆಯ ಶ್ರೀರಾಮ ಮಂದಿರದ ಮಂತ್ರಾಕ್ಷತೆ ವಿತರಣೆ

ಹರಿಹರ : ಅಯೋಧ್ಯೆಯ ಶ್ರೀರಾಮ ಮಂದಿರದ ಮಂತ್ರಾಕ್ಷತೆ ವಿತರಣೆ

ಹರಿಹರ, ಜ.13- ಅಯೋಧ್ಯೆಯಲ್ಲಿ ದಿನಾಂಕ ಜ.22 ರಂದು ಶ್ರೀರಾಮ ಮಂದಿರ ಉದ್ಘಾಟನೆಯಾ ಗುತ್ತಿರುವ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆಗೆ ಬಂದಿರುವ ಮಂತ್ರಾಕ್ಷತೆಯನ್ನು ಹರಿಹರದ ಕುಂಬಾರ ಓಣಿಯ ಶ್ರೀರಾಮನ ಭಕ್ತರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ನಂತರ ಹಲವಾರು ಮನೆಗಳಿಗೆ ತೆರಳಿ ವಿತರಿಸಿದರು.

ಶ್ರೀರಾಮನ ಮಂದಿರ ಲೋಕಾರ್ಪಣೆಯ ಸಂದರ್ಭದಲ್ಲಿ ಅಲ್ಲಿಗೆ ಹೋಗಿ ದರ್ಶನ ಪಡೆದುಕೊಳ್ಳಲು ಸಾಧ್ಯವಾಗದಿದ್ದರೂ ನಾವಿರುವಲ್ಲಿಯೇ ಶ್ರೀರಾಮನ ಮಂತ್ರಾಕ್ಷತೆಯನ್ನು ಪೂಜಿಸಿ, ದೀಪ ಹಚ್ಚಿ, ಶ್ರೀರಾಮನ ನೆನೆದು, ಭಕ್ತಿಯಿಂದ ರಾಮನ ಮಂತ್ರ ಪಠಣ ಮಾಡುತ್ತಾ ಶ್ರೀರಾಮನ ಕೃಪೆಗೆ ಪಾತ್ರರಾಗೋಣ ಎಂಬ ಹಿನ್ನೆಲೆಯಲ್ಲಿ ಕುಂಬಾರ ಓಣಿಯ ಶ್ರೀರಾಮಭಕ್ತರು ಹಳ್ಳದಕೇರಿ, ಲದ್ವಾ ಓಣಿ, ಅಗಸರ ಓಣಿ, ದೇವಸ್ಥಾನ ರಸ್ತೆ ಮತ್ತು ಮುದೇಗೌಡ್ರು ಓಣಿಯ ಮನೆ ಮನೆಗೆ ತೆರಳಿ ಮಂತ್ರಾಕ್ಷತೆ ವಿತರಿಸಿದರು.

ಈ ಸಂದರ್ಭದಲ್ಲಿ ಕುಂಬಾರ ಓಣಿಯ ಶ್ರೀರಾಮ ಭಕ್ತರಾದ ಆದಿತ್ಯ ಟಿ.ಮೆಹರ್ವಾಡೆ, ಸಾಕಮ್ಮ, ನರೇಶ್.ಕೆ.ಖಿರೋಜಿ, ತುಳಜಾರಾಂಸಾ ಎಸ್. ಮೆಹರ್ವಾಡೆ, ಹರೀಶಗೌಡ, ನಿರ್ಮಲಾ, ರತ್ನಮ್ಮ, ಶಶಿಕಲಾ, ದಾಕ್ಷಾಯಿಣಿ ಭಂಡಾರಿ, ಗಂಗಾ ಟಿ. ಮೆಹರ್ವಾಡೆ, ಸಂಜಯ್, ವಿನಾಯಕ, ಕಿರಣ್ ಹಳ್ಳದಕೇರಿ, ಆದಿತ್ಯ ಸೋಳಂಕಿ ಇತರರು ಮಂತ್ರಾಕ್ಷತೆಯನ್ನು ವಿತರಿಸಿದರು.

ವಿಶ್ವಸಂಸ್ಥೆಯ ನಿವೃತ್ತ ಜನಸಂಖ್ಯಾತಜ್ಞರಾದ ಡಾ.ಎಂ.ಶಿವಮೂರ್ತಿ, ಶಾಂಭವಿ ಮಠದ ಶಿವಮೂರ್ತಿ, ಪ್ರೊ.ಎಸ್.ಎಸ್.ಹನಗವಾಡಿಮಠ, ವಿಜಯ ಎಸ್. ಹನಗವಾಡಿಮಠ, ಹೆಚ್.ಎಂ.ಗುರುಬಸವರಾಜಯ್ಯ, ಲತಾ ನಾಗರಾಜ, ಹೆಚ್.ಎಂ.ಜಯಮ್ಮ, ಹೆಚ್.ಎಂ.ಮಹಾದೇವಿ ಸೋಮನಾಥಯ್ಯ, ರಾಜೇಶ್ವರಿ, ರುದ್ರಯ್ಯ ಮುದೇನೂರುಮಠ ಮುಂತಾದವರು ಹಾಜರಿದ್ದರು.

error: Content is protected !!