ಅಯೋಧ್ಯೆಗೆ ನಗರದಿಂದ ಮೋಟಾರ್ ಬೈಕ್‌ನಲ್ಲಿ ಹೊರಟ ದರ್ಶನ್ ಪವಾರ್

ಅಯೋಧ್ಯೆಗೆ ನಗರದಿಂದ ಮೋಟಾರ್ ಬೈಕ್‌ನಲ್ಲಿ ಹೊರಟ ದರ್ಶನ್ ಪವಾರ್

ದಾವಣಗೆರೆ, ಜ.15- ಅಯೋಧ್ಯೆಯ ರಾಮಮಂದಿರಕ್ಕೆ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರೂ,  ಬಿಜೆಪಿ ನಿಷ್ಟಾವಂತ ಕಾರ್ಯಕರ್ತರ ವೇದಿಕೆಯ ಅಟಲ್ ಬಿಹಾರಿ ವಾಜಪೇಯಿ ಅಭಿಮಾನಿ ಬಳಗದ ಅಧ್ಯಕ್ಷ ಎಂ.ಪಿ. ಕೃಷ್ಣಮೂರ್ತಿ ಪವಾರ್ ಅವರ ಪುತ್ರ ದರ್ಶನ್ ಕೆ. ಪವಾರ್ ಅವರು ಮೋಟಾರ್ ಬೈಕ್ ಮೂಲಕ ಹೊರಟಿದ್ದಾರೆ. 

ನಗರ ದೇವತೆ ಶ್ರೀ ದುರ್ಗಾಂಬಿಕ ದೇವಿಗೆ ಇಂದು ಬೆಳಿಗ್ಗೆ ಪೂಜೆ ಸಲ್ಲಿಸಿದ ದರ್ಶನ್, ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಹಿತೈಷಿಗಳು, ಸ್ನೇಹಿತರು, ಬಂಧುಗಳ ಶುಭ ಹಾರೈಕೆಗಳೊಂದಿಗೆ ಆಯೋಧ್ಯೆಗೆ ತಮ್ಮ ಯಾತ್ರೆಯನ್ನು ಆರಂಭಿಸಿದರು.

ತಂದೆ ಎಂ.ಪಿ. ಕೃಷ್ಣಮೂರ್ತಿ ಪವಾರ್ ತಾಯಿ ಶ್ರೀಮತಿ ಲಕ್ಷ್ಮಿಕೆ. ಪವರ್ ಅವರಲ್ಲದೇ, ಎ.ಕೆ. ಫೌಂಡೇಶನ್ ಸಂಸ್ಥಾಪಕ ಕೆ.ಬಿ.ಕೊಟ್ರೇಶ್, ಸತೀಶ್ ಪೂಜಾರಿ,
ಗೋಪಾಲ್ ರಾವ್ ಸಾವಂತ್, ಮಹಾನಗರ ಪಾಲಿಕೆ ಸದಸ್ಯ  ಶಿವಪ್ರಕಾಶ್, ಬಿಜೆಪಿ ಯುವ ನಾಯಕ ನವೀನ್, ಆರ್.ಪ್ರತಾಪ್, ಜಿ.ಕೆ.ಶಿವಶಂಕರ್ ಪೈಲ್ವಾನ್, ಸಂತೋಷ್, ಹರೀಶ್ ಪವಾರ್, ತಿಪ್ಪೇಶ್ ರಾವ್ ಚವ್ಹಾಣ್, ಬಿ.ನೀಲಪ್ಪ, ವಿಶ್ವ ಹಿಂದೂ ಪರಿಷತ್ ಜಿ.ರವೀಂದ್ರ, ಪ್ರವೀಣ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು. 

ಇದೇ ಸಂದರ್ಭದಲ್ಲಿ ಹಿಂದೆ 1990ರ ದಶಕದ ರಾಮಜ್ಯೋತಿ ಕೋಮು-ಗಲಭೆಯಲ್ಲಿ ಹುತಾತ್ಮರಾದ ಚಂದ್ರಶೇಖರ್ ಸಿಂಧೆ ಅವರ ಕುಟುಂಬಕ್ಕೆ ಹತ್ತು ಸಾವಿರ ರೂ. ದೇಣಿಗೆ ನೀಡಲಾಯಿತು. ಗೋಲಿಬಾರ್ ನಲ್ಲಿ  ನೋವುಂಡ ಶೈಲೇಶ್ ಕುಮಾರ್ ಅವರಿಗೆ 5,000 ರೂ ನಗದು ನೀಡಲಾಯಿತು.  

ಸೆರೆಮನೆ ವಾಸ ಅನುಭವಿಸಿದ ವೀರಭದ್ರ ಸ್ವಾಮಿ ಅವರಿಗೆ 5000 ರೂ. ನೀಡಲಾಯಿತು.

error: Content is protected !!