ಹಾವೇರಿ, ಜ. 15 – ನರಸೀಪುರದಲ್ಲಿರುವ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದಲ್ಲಿ ಅಂಬಿಗರ ಚೌಡಯ್ಯನವರ 904ನೇ ಜಯಂತೋತ್ಸವ ಹಾಗೂ 6ನೇ ಶರಣ ಸಂಸ್ಕೃತಿ ಉತ್ಸವ ಸಾಮೂಹಿಕ ವಿವಾಹ ಮಹೋತ್ಸವದ ಅಂಗವಾಗಿ ಸೋಮವಾರ ಸಂಜೆ ಅಂಬಿಗರ ಚೌಡಯ್ಯನವರ ವಚನ ಗ್ರಂಥ ಮಹಾರಥೋತ್ಸವವು ಶ್ರೀ ಶಾಂತಭೀಷ್ಮ ಸ್ವಾಮೀಜಿ ಸಾನ್ನಿಧ್ಯದಲ್ಲಿ ಹಾಗೂ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು. ಮಧ್ಯಾಹ್ನ ನಡೆದ ಅಂಬಿಗರ ಚೌಡಯ್ಯನವರ 904 ನೇ ಜಯಂತೋತ್ಸವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದರು.
ಅಂಬಿಗರ ಚೌಡಯ್ಯ ಗುರುಪೀಠದಲ್ಲಿ ಸಂಭ್ರಮದ ವಚನ ಗ್ರಂಥ ಮಹಾರಥೋತ್ಸವ
![14 ambigara chowdayya 16.01.2024 ಅಂಬಿಗರ ಚೌಡಯ್ಯ ಗುರುಪೀಠದಲ್ಲಿ ಸಂಭ್ರಮದ ವಚನ ಗ್ರಂಥ ಮಹಾರಥೋತ್ಸವ](https://janathavani.com/wp-content/uploads/2024/01/14-ambigara-chowdayya-16.01.2024-860x509.jpg)