ವಾಲ್ಮೀಕಿ ಜಾತ್ರೆ : ಇಂದಿನಿಂದ ರಾಜನಹಳ್ಳಿ ಶ್ರೀಗಳ 3ನೇ ಹಂತದ ರಾಜ್ಯ ಪ್ರವಾಸ

ವಾಲ್ಮೀಕಿ ಜಾತ್ರೆ : ಇಂದಿನಿಂದ ರಾಜನಹಳ್ಳಿ ಶ್ರೀಗಳ  3ನೇ ಹಂತದ ರಾಜ್ಯ ಪ್ರವಾಸ

ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಫೆಬ್ರವರಿ 8 ಮತ್ತು 9 ರಂದು ಹಮ್ಮಿಕೊಂಡಿರುವ 6ನೇ ವರ್ಷದ ಐತಿಹಾಸಿಕ ವಾಲ್ಮೀಕಿ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಇಂದಿನಿಂದ ರಾಜ್ಯದಲ್ಲಿ 3 ನೇ ಹಂತದ ಪ್ರವಾಸ ಕೈಗೊಳ್ಳಲಿದ್ದಾರೆ. 

ಶ್ರೀಗಳು ಮೂರನೇ ಹಂತದ ಪ್ರವಾಸದಲ್ಲಿ ಇಂದು ಬೆಳಗ್ಗೆ 10 ಗಂಟೆಗೆ ಭರಮಸಾಗರದಲ್ಲಿ, ಮಧ್ಯಾಹ್ನ 12 ಕ್ಕೆ ಜಗಳೂರು, 2 ಗಂಟೆಗೆ ನಾಯಕನಹಟ್ಟಿ, ಸಾಯಂಕಾಲ 4 ಗಂಟೆಗೆ ಮೊಳಕಾಲ್ಮೂರಿನಲ್ಲಿ ತಾಲ್ಲೂಕು ಮಟ್ಟದ ಜಾತ್ರಾ ಪೂರ್ವಭಾವಿ ಸಭೆಗಳನ್ನು ನಡೆಸಲಿದ್ದಾರೆ. 

ನಾಳೆ ಚಳ್ಳಕೆರೆ, ಪಾವಗಡ ಮಧುಗಿರಿಯಲ್ಲಿ, ನಾಡಿದ್ದು ಕೊರಟಗೆರೆ, ನೆಲಮಂಗಲ, ದೊಡ್ಡಬಳ್ಳಾಪುರದಲ್ಲಿ ತಾಲ್ಲೂಕುವಾರು ಪ್ರವಾಸ ಕೈಗೊಳ್ಳಲಿದ್ದಾರೆ. ನಂತರ ಇದೇ ದಿನಾಂಕ 15, 16, 17, 18 ರಂದು ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಮತ್ತು ಜ. 19ಕ್ಕೆ ಬೆಂಗಳೂರು ನಗರದಲ್ಲಿ ಸಭೆಗಳನ್ನು ನಡೆಸಲಿದ್ದಾರೆ.

error: Content is protected !!