ನಗರದಲ್ಲಿ ನಾಳೆ ಶೋಭಾಯಾತ್ರೆ

ದಾವಣಗೆರೆ, ಜ. 10- ರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ನಾಡಿದ್ದು  ದಿನಾಂಕ 12ರ ಶುಕ್ರವಾರ ಬೆಳಿಗ್ಗೆ 9 ಗಂಟೆಗೆ  ನಗರದ ರಾಮಕೃಷ್ಣ ಮಿಷನ್ ವತಿಯಿಂದ ಶೋಭಾ ಯಾತ್ರೆ ಹಮ್ಮಿಕೊಳ್ಳಲಾಗಿದೆ. 

ಶ್ರೀ ಜಯದೇವ  ಮುರುಘರಾಜೇಂದ್ರ ವೃತ್ತದಿಂದ ಪ್ರಾರಂಭ ಮಾಡಿ, ಅಂಬೇಡ್ಕರ್ ಸರ್ಕಲ್, ಎವಿಕೆ ಕಾಲೇಜು ರಸ್ತೆ ಮೂಲಕ  ಹರಳೆಣ್ಣೆ ಕೊಟ್ರಬಸಪ್ಪ ವೃತ್ತದ ಮಾರ್ಗವಾಗಿ ರಾಮಕೃಷ್ಣ ಮಿಷನ್ ತನಕ ಶೋಭಾಯಾತ್ರೆ ನಡೆಯಲಿದೆ ಎಂದು ಮಂದಿರದ ಕಾರ್ಯದರ್ಶಿ ಸ್ವಾಮಿ ತ್ಯಾಗೀಶ್ವರಾನಂದ ತಿಳಿಸಿದ್ದಾರೆ. 

error: Content is protected !!