ದಾವಣಗೆರೆ, ಜ. 11 – ಬೆಂಗಳೂರಿನ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಹಾಗೂ ಜಿಲ್ಲಾ ಘಟಕ ಚಿಕ್ಕಮಗಳೂರು ಇವರ ವತಿಯಿಂದ ತರೀಕೆರೆಯಲ್ಲಿರುವ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ರಾಜ್ಯ ಯುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕಲಾ (ಭರತನಾಟ್ಯ) ಕ್ಷೇತ್ರದಿಂದ ಕೊಡಮಾಡಲಾದ ರಾಜ್ಯ ಯುವ ಪ್ರಶಸ್ತಿಯನ್ನು ಜಿಲ್ಲೆಯ ಜ್ಞಾನಿಕಾ ಐನಹಳ್ಳಿ ಪಡೆದಿದ್ದಾರೆ. ಇವರು ಐನಹಳ್ಳಿ ವಿಶ್ವಪ್ರಕಾಶ ಮತ್ತು ಶುಭ ದಂಪತಿ ಜೇಷ್ಠ ಪುತ್ರಿ.
July 23, 2024