ಹರಿಹರದಲ್ಲಿ ಶ್ರೀ ಮಹೇಶ್ವರ ಸ್ವಾಮಿ ಪಲ್ಲಕ್ಕಿ ಉತ್ಸವ

ಹರಿಹರದಲ್ಲಿ ಶ್ರೀ ಮಹೇಶ್ವರ ಸ್ವಾಮಿ ಪಲ್ಲಕ್ಕಿ ಉತ್ಸವ

ಹರಿಹರ, ಜ.8- ಇಲ್ಲಿನ ತುಂಗಭದ್ರಾ ನದಿದಂಡೆ ಮೇಲಿರುವ ಶ್ರೀ ಸಂಗಮೇಶ್ವರ ದೇವಸ್ಥಾನ ಆವರಣದಲ್ಲಿ ನಡೆಯಲಿರುವ ಶ್ರೀ ಮಹೇಶ್ವರ ಜಾತ್ರೆ ಅಂಗವಾಗಿ ನಗರ ದೇವಸ್ಥಾನ ರಸ್ತೆಯ ರೇಣುಕಾ ಮಂದಿರ ದಿಂದ ಶ್ರೀ ಮಹೇಶ್ವರ ಸ್ವಾಮಿ ಪಲ್ಲಕ್ಕಿ ಮಹೋತ್ಸವದ ಮೆರವಣಿಗೆ ಸಡಗರ ಸಂಭ್ರಮದಿಂದ ಮತ್ತು ಶ್ರದ್ಧಾ ಭಕ್ತಿಯಿಂದ ಇಂದು ನಡೆಯಿತು. 

 ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಡಿ.ಜಿ. ಶಿವಾನಂದಪ್ಪ, ಕಾರ್ಯದರ್ಶಿ ವೀರೇಶ್ ಯಾದವಾಡ, ಉಪಾಧ್ಯಕ್ಷ ಟಿ.ಜೆ. ಮುರುಗೇಶಪ್ಪ, ಚೇತನ್ ಮೂರ್ಕಲ್,  ಜಿ.ಕೆ. ವೀರಣ್ಣ, ಫೈನಾನ್ಸ್ ಮಂಜುನಾಥ್ ಅಂಗಡಿ, ಹೆಚ್, ವಿ. ಸಂಜಯ್ಕ, ಕರಿಬಸಪ್ಪ ಕಂಚಿಕೇರಿ, ಹೊಳಗಡ್ಡಿ ಸಿದ್ದೇಶ್,  ಜಿ.ಕೆ. ಮಲ್ಲಿಕಾರ್ಜುನ, ಕಂಚಿಕೇರಿ ಸಿದ್ದೇಶ್, ಕತ್ತಲಗೇರಿ ಶಿವಯೋಗಿ, ಶೇಖರಪ್ರ ಹೋಟೆಲ್, ಗುರುಮೂರ್ತಿ, ಕೊಟ್ರೇಶ್, ಕುಂಬಾರ ಕರಿಬಸಪ್ಪ, ರೇವಣಸಿದ್ದಪ್ಪ ಬಾತಿ, ಮುರುಗೇಶಪ್ಪ, ಬಸವರಾಜಯ್ಯ, ಹಾಲಸ್ವಾಮಿ ಗುತ್ತೂರು, ಅರುಣ್ ಕುಮಾರ್, ಪರಶುರಾಮ್, ಶೇಖರಪ್ಪ, ಪತ್ರಕರ್ತ ಎಂ. ಚಿದಾನಂದ ಕಂಚಿಕೇರಿ, ಬಿಳೆಬಾಳ ಚಂದ್ರಶೇಖರ್ ಇತರರು ಹಾಜರಿದ್ದರು.

error: Content is protected !!