ದಾವಣಗೆರೆ, ಜ.7- ಜಿಲ್ಲಾ ಘಟಕದ ಕಚೇರಿಯಲ್ಲಿ ನಡೆದ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಸಭೆಯಲ್ಲಿ ದಾವಣಗೆರೆ ನಗರ ಘಟಕದ ಗೌರವಾಧ್ಯಕ್ಷರಾಗಿ ಬಸವರಾಜಪ್ಪ, ಅಧ್ಯಕ್ಷರಾಗಿ ಕೈದಾಳ್ ಶಿವಶಂಕರ್, ಕಾರ್ಯಾಧ್ಯಕ್ಷರಾಗಿ ಸುರೇಶ್ ಹಡ್ಲಿಗೆರೆ, ಉಪಾಧ್ಯಕ್ಷರುಗಳಾಗಿ ಮಾಲತೇಶ್ ದೇಸಾಯಿ, ಮಹೇಶ್ವರಪ್ಪ ದೊಡ್ಡಮನಿ, ಗುರುಮೂರ್ತಿ ಕೆ.ಆರ್., ಕಾರ್ಯದರ್ಶಿ ಯಾಗಿ ಚಂದ್ರಶೇಖರ ಎಸ್. ನೂಲಾ, ಸಹ ಕಾರ್ಯದರ್ಶಿಗಳಾಗಿ ಸಂಗಮೇಶಾ ರಾಧ್ಯ ಟಿ., ಖಜಾಂಚಿಯಾಗಿ ಸಿ.ಡಿ ರಮೇಶ್, ಸಂಘಟನಾ ಕಾರ್ಯದರ್ಶಿ ಗಳಾಗಿ ವೀರೇಶ್, ರುದ್ರೇಶ್ ಗುರು ಮೂರ್ತಿ ಹೋಟೆಲ್, ಚಂದ್ರಪ್ಪ, ಬಿ.ಎನ್. ಮಂಜಣ್ಣ, ಸತೀಶ್, ರವಿಕುಮಾರ್, ವೀರೇಶ್ ವಿ.ಜೆ., ಪದಾಧಿಕಾರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಬಾದಾಮಿ ಕರಿಬಸಪ್ಪ, ಎಂ.ದೊಡ್ಡಪ್ಪ, ಕಾರ್ಯದರ್ಶಿ ಕಾಶಿನಾಥ್, ಜಿಲ್ಲಾ ನೌಕರ ಘಟಕದ ಅಧ್ಯಕ್ಷರಾದ ಶ್ರೀಧರ್, ತಾಲ್ಲೂಕು ಅಧ್ಯಕ್ಷ ಎಸ್. ಮಲ್ಲಿನಾಥ್, ಮಹಿಳಾ ಘಟಕದ ಅಧ್ಯಕ್ಷರಾದ ವೀಣಾ ನಟರಾಜ್ ಬೆಳ್ಳೂಡಿ, ಶೈಲಜ ಮತ್ತು ಇತರರು ಉಪಸ್ಥಿತರಿದ್ದರು.