ರಾಣೇಬೆನ್ನೂರು ಶಿಕ್ಷಕರ ಸೊಸೈಟಿ ಚುನಾವಣೆ : ಕ್ರಿಯಾ ಸಮಿತಿಗೆ ಕೈಕೊಟ್ಟ ಶಿಕ್ಷಕರು

ರಾಣೇಬೆನ್ನೂರು ಶಿಕ್ಷಕರ ಸೊಸೈಟಿ ಚುನಾವಣೆ : ಕ್ರಿಯಾ ಸಮಿತಿಗೆ ಕೈಕೊಟ್ಟ ಶಿಕ್ಷಕರು

ರಾಣೇಬೆನ್ನೂರು, ಜ.7- ಇಲ್ಲಿನ ತಾಲ್ಲೂಕು ಪ್ರಾಥ ಮಿಕ ಶಾಲಾ ಶಿಕ್ಷಕ-ಶಿಕ್ಷಕಿಯರ ಸಹಕಾರಿ ಸಂಘದ ನಿರ್ದೇ ಶಕ ಮಂಡಳಿ ಚುನಾವಣೆ ಇಂದು ನಡೆದು, ಸಂಜೆಯ ಮತ ಎಣಿಕೆಯಲ್ಲಿ ಹೋರಾಟ ಸಮಿತಿಯ 13  ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಇವರು  ಬಹಳ ವರ್ಷಗಳ ಪ್ರಯತ್ನದ ನಂತರ ಆಡಳಿತದ ಚುಕ್ಕಾಣಿ ಹಿಡಿದಂತಾಗಿದೆ.

ಕಳೆದ ಬಾರಿ 6 ಸ್ಥಾನ ಪಡೆದ ಹೋರಾಟ ಸಮಿತಿ, ಈ ಬಾರಿ ಎಲ್ಲಾ 13 ಸ್ಥಾನ ಪಡೆದು ಆಡಳಿತ ಹಿಡಿದರೆ, ಕಳೆದ ಬಾರಿ 7 ಸ್ಥಾನ ಪಡೆದು ಆಡಳಿತ ನಡೆಸಿದ  ಕ್ರಿಯಾ ಸಮಿತಿ ಈ ಬಾರಿ ಎಲ್ಲ ಸ್ಥಾನಗಳನ್ನು ಕಳೆದುಕೊಂಡಿದೆ.

ಡಿ.ಪಿ. ಜೀವನಗೌಡ್ರ, ಎನ್.ಎಸ್. ರಾಮನಗೌಡ್ರ, ಎಂ.ಎ. ದಾರೂಗಾರ, ಎಂ.ಸಿ. ಬಲ್ಲೂರ, ರಾಜಕುಮಾರ ಎಮ್ಮೇರ, ಮಾಕಾಳ ಎಸ್.ಜಿ.ರಾಘವೇಂದ್ರ ದೇಸಾಯಿ ಸಾಮಾನ್ಯ ಕ್ಷೇತ್ರದಿಂದ, ಎಸ್.ವಿ.ದೊಡ್ಡಮನಿ ಎಸ್ಸಿ, ಕೆ.ವಿ. ಕಾಮಣ್ಣನವರ ಎಸ್ಟಿ, ಆನಂದ ಏಳಕುರಿ ಅ ವರ್ಗ, ಗೀತಾ ಅಜ್ಜೆವಡಿಮಠ ಬ ವರ್ಗ, ಅನ್ನಪೂರ್ಣ ಬಣಕಾರ, ನಾಗರತ್ನ ಹಂಚಿನಮನಿ ಮಹಿಳಾ ಮೀಸಲು ಕ್ಷೇತ್ರದಿಂದ ಆಯ್ಕೆಯಾದವರು.

error: Content is protected !!