ಹರಿಹರ, ಜ.7- ಸಾಹಿತ್ಯಿಕ ಹಾಗೂ ಸಾಂ ಸ್ಕೃತಿಕ ಚಟುವಟಿಕೆಗಳ ಕೇಂದ್ರ ಸಾಹಿತ್ಯ ಸಂಗಮ ಹರಿಹರ ಸಂಸ್ಥೆ ಕೊಡ ಮಾಡುವ `ಹರಿಹರ ಶ್ರೀ’ ಪ್ರಶಸ್ತಿಗಾಗಿ 2021 ಹಾಗೂ 2022ನೇ ಸಾಲಿನಲ್ಲಿ ಪ್ರಕಟವಾದ ಕವನ ಸಂಕಲನಗಳನ್ನು ಆಹ್ವಾ ನಿಸಲಾಗಿತ್ತು. 2021 ನೇ ಸಾಲಿಗೆ ಬೆಳಗಾವಿಯ ಡಾ. ಅನ್ನಪೂರ್ಣ ಹಿರೇ ಮಠ ಅವರು ರಚಿಸಿದ `ಭಾವ ಸಿರಿ’ ಕವನ ಸಂಕಲನ ಹಾಗೂ 2022 ನೇ ಸಾಲಿಗೆ ಕಾರವಾರದ ಎ.ಎನ್. ರಮೇಶ್ ಗುಬ್ಬಿ ಅವರ `ಬುದ್ಧ ನಗುತ್ತಿ ದ್ದಾನೆ’ ಕವನ ಸಂಕಲನ ರಾಜ್ಯಮಟ್ಟದ `ಹರಿಹರ ಶ್ರೀ’ ಪ್ರಶಸ್ತಿಗೆ ಆಯ್ಕೆಯಾ ಗಿವೆ ಎಂದು ಸಾಹಿತ್ಯ ಸಂಗಮದ ಅಧ್ಯಕ್ಷ ವಿ.ಬಿ. ಕೊಟ್ರೇಶಪ್ಪ ತಿಳಿಸಿದ್ದಾರೆ.
ರಾಜ್ಯಮಟ್ಟದ ಹರಿಹರ ಶ್ರೀ ಪ್ರಶಸ್ತಿ ಪ್ರಕಟ
![07 hrr news 08.01.2024 ರಾಜ್ಯಮಟ್ಟದ ಹರಿಹರ ಶ್ರೀ ಪ್ರಶಸ್ತಿ ಪ್ರಕಟ](https://janathavani.com/wp-content/uploads/2024/01/07-hrr-news-08.01.2024.jpg)