20, 21ನೇ ವಾರ್ಡ್‍ನಲ್ಲಿ ಕಾಮಗಾರಿಗಳಿಗೆ ಚಾಲನೆ

20, 21ನೇ ವಾರ್ಡ್‍ನಲ್ಲಿ ಕಾಮಗಾರಿಗಳಿಗೆ ಚಾಲನೆ

ದಾವಣಗೆರೆ, ಜ.5- ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 20 ಮತ್ತು 21ನೇ ವಾರ್ಡ್‍ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಚಾಲನೆ ನೀಡಿದರು.

ನಂತರ ಮಾತನಾಡಿದ ಶಾಸಕರು, ಮಹಾನಗರ ಪಾಲಿಕೆಯಿಂದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ದ ವಾರ್ಡ್‍ಗಳಿಗೆ ಅನುದಾನ ನೀಡಲಾಗಿದ್ದು, ಶೀಘ್ರ ದಲ್ಲೇ ಸರ್ಕಾರದಿಂದ ಅನುದಾನ ತಂದು ಕಾಮಗಾರಿಗ ಳನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.               

ಮಹಾಪೌರರಾದ ವಿನಾಯಕ್ ಪೈಲ್ವಾನ್ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮಗಳಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮೀನಾಕ್ಷಿ ಜಗದೀಶ್, ಸದಸ್ಯರುಗಳಾದ ಶ್ರೀಮತಿ ಶಿವಲೀಲಾ ಕೊಟ್ರಯ್ಯ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಮುಖಂಡರುಗಳಾದ ಸುರೇಂದ್ರಪ್ಪ, ಮಹೇಶ್ವ ರಪ್ಪ, ಶಿವಪ್ಳ ಗುರುಸಿದ್ದಪ್ಪ, ರೇವಣಸಿದ್ದಯ್ಯ, ಬಕ್ಕಯ್ಯ, ವೆಂಕಟೇಶ್ ನಾಯ್ಕ, ಹರೀಶ್ ಕೆ.ಎಲ್.ಬಸಾಪುರ, ಆನೆಕೊಂಡ ನಾಗರಾಜ್, ತಿಪ್ಪೇಸ್ವಾಮಿ, ಲಿಂಗರಾಜ್, ಜಿ.ತಿಪ್ಪೇಸ್ವಾಮಿ, ಕೆ.ಬಿ.ಲಿಂಗರಾಜು, ನಾಗರಾಜ್, ಪ್ರತಾಪ್, ರುದ್ರಪ್ಪ, ಶಿವಕುಮಾರ್ ಟಿ. ಮತ್ತಿತರರಿದ್ದರು.  

error: Content is protected !!