ದಾವಣಗೆರೆ, ಜ.5- ನಗರದ 19ನೇ ವಾರ್ಡಿಗೆ ಸಂಬಂಧಪಡುವ ಆರ್.ಎಂ.ಸಿ. ರಸ್ತೆಗೆ ಹೊಂದಿಕೊಂಡಿರುವ ಚೌಡೇಶ್ವರಿ ದೇವಸ್ಥಾನದವರೆಗಿನ ಸುಮಾರು 15 ಲಕ್ಷ ರೂ. ವೆಚ್ಚದ ಸಿ.ಸಿ. ರಸ್ತೆ ಕಾಮಗಾರಿ ಹಾಗೂ ಟಿ.ಸಿ. ಲೇಔಟ್ನಲ್ಲಿರುವ ಉಮಿಯಾ ಮಂದಿರದಿಂದ ಧನ್ವಂತರಿ ಏಜೆನ್ಸಿವರೆಗೆ ಸುಮಾರು 24 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಇಂದು ಮಹಾನಗರ ಪಾಲಿಕೆಯ ಮಹಾಪೌರ ವಿನಾಯಕ ಪೈಲ್ವಾನ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪಾಲಿಕೆಯ ವಿರೋಧ ಪಕ್ಷದ ನಾಯಕ ಪ್ರಸನ್ನ ಕುಮಾರ್, ಪಾಲಿಕೆ ಸದಸ್ಯ ಆರ್.ಎಲ್.ಶಿವಪ್ರಕಾಶ್, ಸ್ಥಳೀಯ ಮುಖಂಡರಾದ ಸೋಮಶೇಖರ್, ಎಸ್.ಬಿ. ಶೇಖರ್ ಅರೇಮಲ್, ಯಲ್ಲೇಶ್, ಮಂಜು ನಾಥ, ಸಂತೋಷ, ಕರಿಬಸಪ್ಪ, ಮಹಾನಗರ ಪಾಲಿಕೆ ಎಇಇ ಹೆಚ್.ಶೃತಿ, ಎ.ಇ. ದೀಪಾ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.