ಏಸು ಜೀವನ ಸಂದೇಶಗಳನ್ನು ಅಳವಡಿಸಿಕೊಳ್ಳಿ

ಏಸು ಜೀವನ ಸಂದೇಶಗಳನ್ನು ಅಳವಡಿಸಿಕೊಳ್ಳಿ

ಹರಪನಹಳ್ಳಿ ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ್‌ ಕರೆ

ಹರಪನಹಳ್ಳಿ, ಡಿ. 28 – ಏಸು ಕ್ರಿಸ್ತನ ಜೀವನ ಸಂದೇಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್‌ ಹೇಳಿದರು.
ಪಟ್ಟಣದ ಹೊಸಪೇಟೆ ರಸ್ತೆಯ ಬಾಬು ಜಗಜೀವನರಾಮ್ ಭವನದಲ್ಲಿ ಫುಲ್ ಗಾಸ್ಪೆಲ್ ಅಸೆಂಬ್ಲಿ ಚರ್ಚಿನವರು ಆಯೋಜಿಸಿದ್ದ ಕ್ರಿಸ್‍ಮಸ್ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕೇಕ್ ಕಟ್ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಏಸು ಹೇಳಿದ ಪ್ರೀತಿ, ಕ್ಷಮೆ, ದಯಾ ಗುಣಗಳು ಎಲ್ಲರ ಬದುಕಿನ ದಾರಿ ದೀಪವಾಗಲಿ ಶಾಂತಿ, ಸಮೃದ್ಧಿ ಎಲ್ಲೆಡೆ ತುಂಬಲಿ ಎಂದು ಆಶೀಸಿದರು.
ಈ ಸಂದರ್ಭದಲ್ಲಿ ಹಾಸ್ಟೆಲ್ ವಾರ್ಡನ್‍ಗಳಾದ ನಾಗರತ್ನಮ್ಮ ಹಾಗೂ ಶಕುಂತಲಾ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಮಕ್ಕಳಿಂದ ನಾಟಕ, ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ತುಮಕೂರಿನ ಸಮ್‍ವೇಲ್ ಅವರು ಏಸುಕ್ರಿಸ್ತನ ಜೀವನ ಸಾಧನೆಯ ಬಗ್ಗೆ ಪ್ರವಚನ ನೀಡಿದರು.
ಈ ವೇಳೆ ಚರ್ಚಿನ ಮುಖ್ಯಸ್ಥ ನೀಲಂ ಆರ್ಮಸ್ಟ್ರಾಂಗ್, ಸರಳ ನೀಲಂ ಆರ್ಮಸ್ಟ್ರಾಂಗ್, ಸುಲೇಮಾನ್ ದೊಡ್ಡಮನಿ, ಷುಷ್ಮಾ ದೊಡ್ಡಮನಿ, ಪಿಲಿಪ್ ದೊಡ್ಡಮನಿ, ಮೀನಾಕ್ಷಿ ದೊಡ್ಡಮನಿ, ಪ್ರದೀಪ್ ಕೊಟ್ಟೂರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

error: Content is protected !!