ಹರಪನಹಳ್ಳಿ, ಡಿ. 27 – ಪಟ್ಟಣ ಸಮೀಪದ ದೇವರ ತಿಮ್ಮಲಾಪುರ ಗ್ರಾಮದ ಇತಿಹಾಸ ಪ್ರಸಿದ್ದ ಲಕ್ಷ್ಮಿ ವೆಂಕಟೇಶ್ವರ ರಥೋತ್ಸವ ಮಂಗಳವಾರ ರಾತ್ರಿ ಅಪಾರ ಭಕ್ತರ ಮಧ್ಯೆ ಅತ್ಯಂತ ಸಡಗರ, ಸಂಭ್ರಮದಿಂದ ಜರುಗಿತು. ರಾತ್ರಿ ಸರಿಯಾಗಿ 7.17ಕ್ಕೆ ರಥದ ಗಾಲಿಗಳು ಉರುಳಿದಾಗ ಭಕ್ತರು ಗೋವಿಂದ ಗೋವಿಂದ ಎನ್ನುತ್ತಾ ಬಾಳೆ ಹಣ್ಣು ತೂರಿ ಭಕ್ತಿ ಸಮರ್ಪಿಸಿದರು.
ಬಾವುಟವನ್ನು 2.12 ಲಕ್ಷಕ್ಕೆ ಮತ್ತೂರು ಕೆ. ಬಸವರಾಜ ಹರಾಜಿನಲ್ಲಿ ಪಡೆದುಕೊಂಡರು. ಹೂವಿನ ಹಾರವನ್ನು 31 ಸಾವಿರಗಳಿಗೆ ಬಳ್ಳಾರಿ ರಾಮ ಪ್ರಸಾದ್ ಹರಾಜಿನಲ್ಲಿ ಪಡೆದುಕೊಂಡರು.
ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ್, ಧರ್ಮದರ್ಶಿ ಕಟ್ಟಿ ಹರ್ಷ, ದಂಡಿನ
ಹರೀಶ, ಕಾಂಗ್ರೆಸ್ ಹಿರಿಯ ಮುಖಂಡ ಸಿ. ಚಂದ್ರಶೇಖರ ಭಟ್, ಜಿ.ಬಿ. ವಿನಯಕುಮಾರ, ಸಿಪಿಐ. ನಾಗರಾಜ, ಎಂ. ಕಮ್ಮಾರ, ಪಿಎಸ್ಐ ಶಂಭುಲಿಂಗ ಹಿರೇಮಠ, ಧಾರ್ಮಿಕ ದತ್ತಿ ಇಲಾಖೆಯ ರಮೇಶ್, ಶಿವಕುಮಾರ, ಪುರಸಭಾ ಸದಸ್ಯರು ಎಂ.ವಿ. ಅಂಜಿನಪ್ಪ, ಗೊಂಗಡಿ ನಾಗರಾಜ, ಲಾಟಿ ದಾದಾಪೀರ್, ಹಾಗೂ ಶಿವರಾಜ, ಡಾ. ರಮೇಶಕುಮಾರ್ ಹಾಜರಿದ್ದರು.
ದೇವರ ತಿಮ್ಮಲಾಪುರದಲ್ಲಿ ವೆಂಕಟೇಶ್ವರ ರಥೋತ್ಸವ
![05 thimmalapura news '28.12.2023 ದೇವರ ತಿಮ್ಮಲಾಪುರದಲ್ಲಿ ವೆಂಕಟೇಶ್ವರ ರಥೋತ್ಸವ](https://janathavani.com/wp-content/uploads/2023/12/05-thimmalapura-news-28.12.2023-860x564.jpg)