ನಗರದ ಕರುಣಾ ಟ್ರಸ್ಟ್‌ನಿಂದ ಇಂದು ಸೈಕಲ್ ವಿತರಣೆ

ಎಂಸಿಸಿ ಬಿ ಬ್ಲಾಕ್‌ನ 3ನೇ ಮುಖ್ಯರಸ್ತೆಯಲ್ಲಿರುವ ಕರುಣಾ ಜೀವ ಕಲ್ಯಾಣ ಟ್ರಸ್ಟ್‌ನಲ್ಲಿ ಇಂದು ಸಂಜೆ 5 ಗಂಟೆಗೆ ಬಡತನ ನಿರ್ಮೂಲನೆಗಾಗಿ 75ನೇ ಸೈಕಲ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದು, ಕರುಣಾ ಟ್ರಸ್ಟ್‌ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಮನೋರೋಗ ತಜ್ಞ ಡಾ. ಸುದರ್ಶನ್, ಅಗಡಿ ಮಹಾಂತೇಶ್,  ಜಯಕುಮಾರ್,  ಬಸವರಾಜ್ ಒಡೆಯರ್ ಉಪಸ್ಥಿತರಿರುವರು.  ಡಾ. ಹೆಚ್.ಎನ್.ಮಲ್ಲಿಕಾರ್ಜುನ್ ಅಧ್ಯಕ್ಷತೆ ವಹಿಸಲಿದ್ದಾರೆ.

error: Content is protected !!