ಸಿರಿಗೆರೆಯ ಶ್ರೀ ಗುರುಶಾಂತೇಶ್ವರ ದಾಸೋಹ ಮಂಟಪದಲ್ಲಿ ಇಂದು ಸಂಜೆ 6 ಗಂಟೆಗೆ ದ್ವಿತೀಯ ಪಿಯುಸಿ ಕನ್ನಡ ಭಾಷಾವಿಷಯದ ಪಠ್ಯ ಕೃಷ್ಣೇಗೌಡರ ಆನೆ ನೀಳ್ಗತೆಯ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಶ್ರೀ ಗುರುಶಾಂತೇಶ್ವರ ದಾಸೋಹ ಮಂಟಪದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿಮರ್ಷಕ, ಅಂಕಣಕಾರ ಹೆಚ್.ಎಸ್. ಸತ್ಯನಾರಾಯಣ ಪಠ್ಯವನ್ನು ಕುರಿತು ಹಾಗೂ ರಂಗ ಕರ್ಮಿ ಶಶಿಕಾಂತ ಯಡಹಳ್ಳಿ ನಾಟಕ ಕುರಿತು ಉಪನ್ಯಾಸ ನೀಡಲಿದ್ದಾರೆ. ಪ್ರಾಂಶುಪಾಲರುಗಳಾದ ಶಿವನಗೌಡ ಕೆ.ಸುರಕೋಡ, ಜಿ.ಸಿ. ಪ್ರವೀಣ್ ಕುಮಾರ್ ಉಪಸ್ಥಿತರಿರಲಿದ್ದಾರೆ.
July 24, 2024