ಜಯದೇವ ವೃತ್ತದಲ್ಲಿರುವ ಶ್ರೀ ರಾಜನಹಳ್ಳಿ ಹರಿಹರಪ್ಪ ಟ್ರಸ್ಟ್ ವತಿಯಿಂದ ಶ್ರೀ ಗುರು ದತ್ತಾತ್ರೇಯ ಸ್ವಾಮಿಯ 38ನೇ ವಾರ್ಷಿಕೋತ್ಸವ, ಪ್ರತಿಷ್ಠಾಪನಾ ಸುಸ್ಮರಣ ಹಾಗೂ ಶ್ರೀ ಗೀತಾ ಜಯಂತಿ ಮತ್ತು ಶ್ರೀ ಗುರು ದತ್ತಾತ್ರೇಯ ಜಯಂತಿ ಮಹೋತ್ಸವದ ಅಂಗವಾಗಿ ಇಂದು ಹುಣ್ಣಿಮೆ ದಿನ ಶ್ರೀ ಗುರು ದತ್ತಾತ್ರೇಯ ಜಯಂತ್ಯೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 6 ಗಂಟೆಗೆ ಕಾಕಡಾರತಿ, 8 ಗಂಟೆಗೆ ಶ್ರೀ ಗಣಪತಿ, ಶ್ರೀ ವೀರಾಂಜನೇಯ ಸ್ವಾಮಿಗೆ ಪೂಜೆ ಮತ್ತು ಶ್ರೀ ದತ್ತಾತ್ರೇಯ ಮೂರ್ತಿಗೆ ಡಾ. ಜಾಧವ್ ಅವರಿಂದ ಹೂವಿನ ಅಲಂಕಾರ ಸೇವೆ ನಡೆಯುವುದು. ರುದ್ರಾಭಿಷೇಕ, 10.30 ರಿಂದ ಶ್ರೀ ಸತ್ಯದತ್ತ ವ್ರತ ಕಾರ್ಯಕ್ರಮ ನಡೆಯಲಿದೆ.
ಮಧ್ಯಾಹ್ನ 1 ಗಂಟೆಗೆ ಮಹಾಮಂಗಳಾರತಿ, ತೀರ್ಥಪ್ರಸಾದ ಮತ್ತು ಅನ್ನ ಸಂತರ್ಪಣೆಯನ್ನು ವೈಶ್ಯ ಹಾಸ್ಟೆಲ್ನಲ್ಲಿ ಏರ್ಪಡಿಸಲಾಗಿದೆ.