ಹರಿಹರ, ಡಿ,23- ವಕೀಲರ ಸಂಘದ ಹಿರಿಯರ ಮಾತಿಗೆ ಮನ್ನಣೆ ಕೊಟ್ಟು ವಕೀಲ ಬಿ. ಆನಂದ್ ರವರೆಗೆ ಬೆಂಬಲ ಸೂಚಿಸಿ ಚುನಾವಣಾ ಕಣದಿಂದ ನಿವೃತ್ತಿ ಘೋಷಣೆ ಮಾಡಿರುವುದಾಗಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಹೆಚ್.ಹೆಚ್. ಲಿಂಗರಾಜ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇದೇ ದಿನಾಂಕ 30 ರಂದು ನಡೆಯಲಿರುವ ಚುನಾವಣೆ ಪಕ್ರಿಯೆಗಳು ಸಂಪೂರ್ಣವಾಗಿ ನಡೆದು ಆ ನಂತರ ಚುನಾವಣಾಧಿಕಾರಿ ಗಳು ಯಾವ ವ್ಯಕ್ತಿ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡುತ್ತಾರೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ತಾವು ನಿವೃತ್ತಿ ಘೋಷಣೆ ಮಾಡಿದ್ದೇನೆಯೇ ವಿನಃ ಚುನಾವಣಾ ಕಣದಿಂದ ನಾಮಪತ್ರವನ್ನು ವಾಪಸ್ ಪಡೆದಿರುವುದಿಲ್ಲ ಎಂದು ಲಿಂಗರಾಜ್ ಸ್ಪಷ್ಟನೆ ನೀಡಿದ್ದಾರೆ.