ಎಸ್ಸೆಸ್‌ಗೆ ಈಡಿಗ ಸಮುದಾಯದ ಗೌರವ

ಎಸ್ಸೆಸ್‌ಗೆ ಈಡಿಗ ಸಮುದಾಯದ ಗೌರವ

ದಾವಣಗೆರೆ, ಡಿ. 23 – ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ 24ನೇ ಮಹಾಧಿವೇಶನ ಅಂಗವಾಗಿ ಏರ್ಪಾಡಾಗಿದ್ದ ಸಾರೋಟ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ  ಶಾಮನೂರು ಶಿವಶಂಕರಪ್ಪ ಅವರನ್ನು ಜಿಲ್ಲಾ ಈಡಿಗ ಸಮುದಾಯದವರು   ಎಸ್ಸೆಸ್ ಅವರನ್ನು ಗೌರವಿಸಿದರು.

ವೀರಶೈವ-ಲಿಂಗಾಯತ ಮಹಾಸಭಾದ ಮಹಾಧಿವೇಶನವು ತಮ್ಮ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಲೆಂದು ಈಡಿಗ ಸಮುದಾಯದವರು ಎಸ್ಸೆಸ್ ಅವರಿಗೆ ಈಡಿಗ ಸಮುದಾಯ ಶುಭ ಹಾರೈಸಿತು.

ಈ ಸಂದರ್ಭದಲ್ಲಿ ಜಿಲ್ಲಾ ಈಡಿಗ ಸಮುದಾಯದ ಅಧ್ಯಕ್ಷ ಹೆಚ್.ಶಂಕರ್, ಪ್ರಧಾನ ಕಾರ್ಯದರ್ಶಿ ಎ.ನಾಗರಾಜ್, ರವೀಂದ್ರಬಾಬು, ಜಯಪ್ರಕಾಶ್, ಮಹಾಬಲೇಶ್, ರಾಜು ಮತ್ತಿತರರಿದ್ದರು.

error: Content is protected !!