ಎಸ್ಸೆಸ್‌ಗೆ ಬಂಟರ ಸಮುದಾಯ ಗೌರವ

ಎಸ್ಸೆಸ್‌ಗೆ ಬಂಟರ ಸಮುದಾಯ ಗೌರವ

ದಾವಣಗೆರೆ, ಡಿ. 23 – ಅಖಿಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾದ 24ನೇ ಮಹಾಧಿವೇಶನ ಅಂಗವಾಗಿ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ಸಾರೋಟ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಜಿಲ್ಲಾ ಬಂಟರ ಸಮುದಾಯದವರು  ಎಸ್ಸೆಸ್ ಅವರನ್ನು ಗೌರವಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಬಂಟರ ಸಮುದಾಯದ ಮುಖಂಡರುಗಳಾದ ದಿನೇಶ್ ಕೆ. ಶೆಟ್ಟಿ, ಉಮೇಶ್ ಶೆಟ್ಟಿ, ಬೇಳೂರು ಸಂತೋಷ್ ಕುಮಾರ್ ಶೆಟ್ಟಿ, ಶ್ರೀಮತಿ ಲತಿಕಾ ಶೆಟ್ಟಿ, ಅಕ್ಷಯ್ ಶೆಟ್ಟಿ, ಡಾ. ಶುಕ್ಲಾಶೆಟ್ಟಿ ಮತ್ತಿತರರಿದ್ದರು.

error: Content is protected !!