ಕಲಾವಿದ ಮಲ್ಲೇಶ್ ನಿಧನಕ್ಕೆ ಸೋಮಲಾಪುರ ಶೋಕ

ದಾವಣಗೆರೆ, ಡಿ. 24 – ನಗರದ ವಾದ್ಯಗೋಷ್ಠಿ ಕಲಾವಿದ ಹಾಗೂ ಗಾಂಧೀಜಿ ಹರಿಜನ ಯುವಕ ಸಂಘದ ನಿರ್ದೇಶಕ ಮತ್ತು ಜಿಲ್ಲಾ ಆರೋಗ್ಯ ಇಲಾಖೆಯ ಸಹಾಯಕ ಎಂ.ಮಲ್ಲೇಶ್ ನಿಧನಕ್ಕೆ ಕೆಪಿಸಿಸಿ ಎಸ್ಸಿ ವಿಭಾಗದ ಮಾಜಿ ಕಾರ್ಯದರ್ಶಿಯೂ ಆದ ಗಾಂಧೀಜಿ ಹರಿಜನ ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ಸೋಮಲಾಪುರ ಹನುಮಂತಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಉದ್ದಗಲಕ್ಕೂ ವಾದ್ಯ ಗೋಷ್ಠಿಯ ಎಲ್ಲಾ ವಾದ್ಯಗಳನ್ನು ನುಡಿಸಿ, ಲಕ್ಷಾಂತರ ಜನರ ಮನಸ್ಸು ರಂಜಿಸುತ್ತಿದ್ದ ವಾದ್ಯ ಕಲಾವಿದ ಮಲ್ಲೇಶ್  ಅವರ ನಿಧನದಿಂದ ಕಲಾ ರಸಿಕರಿಗೆ  ತುಂಬಲಾರದ ನಷ್ಟವಾಗಿದೆ ಎಂದು ಹನುಮಂತಪ್ಪ ಕಂಬನಿ ಮಿಡಿದಿದ್ದಾರೆ.

error: Content is protected !!