ಸುವರ್ಣ ಕರ್ನಾಟಕ ವೇದಿಕೆಯಿಂದ ರಾಜ್ಯೋತ್ಸವ

ಸುವರ್ಣ ಕರ್ನಾಟಕ ವೇದಿಕೆಯಿಂದ ರಾಜ್ಯೋತ್ಸವ

ದಾವಣಗೆರೆ, ಡಿ. 24- ಸುವರ್ಣ ಕರ್ನಾಟಕ ವೇದಿಕೆಯ ಗ್ರಾಮ ಘಟಕದ ವತಿಯಿಂದ ಹೊನ್ನಮರಡಿ, ಆಂಜನೇಯ ನಗರ ಕಾರಿಗನೂರು ಕ್ರಾಸ್‌ನಲ್ಲಿ 68ನೇ ಕನ್ನಡ ರಾಜ್ಯೋತ್ಸವವನ್ನು ನಿವೃತ್ತ ಯೋಧರಿಂದ  ಧ್ವಜಾ ರೋಹಣ ನೆರವೇರಿಸುವ ಮೂಲಕ ಆಚರಿಸಲಾಯಿತು.

ನಿವೃತ್ತ ಯೋಧರಾದ ಚನ್ನಬಸವನಗೌಡ ಮಾತ ನಾಡಿ, ಈ ದಿನಗಳಲ್ಲಿ ಹೆಚ್ಚಿನ ಮಕ್ಕಳು ಇಂಜಿನಿಯರ್, ಡಾಕ್ಟರ್ ಅಂತ ಓದುವ ಮೂಲಕ ಹುದ್ದೆಗಳಿಗೆ ಹೋಗುತ್ತಿರುವುದು ಹೆಚ್ಚಾಗಿದ್ದು, ದೇಶ ಸೇವೆಗೆಂದು ಒಂದು ದೇಶದ ಗಡಿ ಕಾಯುವ ಆಯ್ಕೆ ಮಾಡಿಕೊಳ್ಳುವ ಮೂಲಕ ಮುಂದಾಗಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ನಿವೃತ್ತ ಯೋಧ ಹೆಚ್. ಸುರೇಶ್‌ರಾವ್, ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಸಂತೋಷ್ ಕುಮಾರ್, ಗ್ರಾಮ ಘಟಕದ ಅಧ್ಯಕ್ಷ ಬಸವರಾಜ್, ಗ್ರಾಮ ಘಟಕದ ಗೌರವ ಅಧ್ಯಕ್ಷ ಗಂಗಾಧರಪ್ಪ, ಅಂಜಿನಪ್ಪ, ಕೆ. ರೇವಣಸಿದ್ದೇಶ ನಮ್ಮ ಜೈ ಕರುನಾಡು ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಮಂಜುನಾಥ್‌ಗೌಡ ಮತ್ತು ಇತರರು ಭಾಗವಹಿಸಿದ್ದರು.

error: Content is protected !!