ಬನ್ನಿ ಮಹಾಂಕಾಳಿ ದೇವಸ್ಥಾನದಲ್ಲಿ ಸಂಭ್ರಮದ ದೀಪೋತ್ಸವ

ಬನ್ನಿ ಮಹಾಂಕಾಳಿ ದೇವಸ್ಥಾನದಲ್ಲಿ ಸಂಭ್ರಮದ ದೀಪೋತ್ಸವ

ದಾವಣಗೆರೆ, ಡಿ. 15 – ನಗರದ ಆಂಜನೇಯ ಬಡಾವಣೆಯ 19ನೇ ಕ್ರಾಸ್‌ನಲ್ಲಿರುವ ಬನ್ನಿ ಮಹಾಕಾಳಿ ದೇವಸ್ಥಾನ ಅಭಿವೃದ್ಧಿ ಸಮಿತಿ ವತಿಯಿಂದ ಶುಕ್ರವಾರ ಸಂಜೆ ಶ್ರೀ ಬನ್ನಿ ಮಹಾಕಾಳದೇವಿಯ 11ನೇ ವರ್ಷ ಕಡೆಯ ಕಾರ್ತಿಕ ಮತ್ತು ದೀಪೋತ್ಸವ  ಮಹೋತ್ಸವು ಇಂದು ವಿಜೃಂಭಣೆಯಿಂದ ನಡೆಯಿತು 

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಬಿದ್ದಹನುಮಪ್ಪನಹಟ್ಟಿ ಕಂಚಿಕೇರಿಯ ಶ್ರೀ ಬಸವರಾಜ ಗುರೂಜಿ,  ಪ್ರೇರಣ ಹೆಲ್ತ್ ಕೇರ್ ಕ್ಲಿನಿಕ್ ಲ್ಯಾಬೋರೇಟರಿಯ ಅನಿಲ್ ಗೌಡ್ರು ಶೀಲಾ, ಪಾಲಿಕೆ ಮಾಜಿ ಉಪ ಮಹಾಪೌರರಾದ ನಾಗರತ್ನಮ್ಮ, ಪಾಲಿಕೆ ಸದಸ್ಯರಾದ ವೀಣಾ ನಂಜಪ್ಪ, ಮಹಾದೇವಪ್ಪ, ಶಿವಮೂರ್ತಿ, ಮಾಕನೂರ ಮಲ್ಲಿಕಾರ್ಜುನ್, ಟಿ. ಬಸವರಾಜ್, ದೀಪು ಹಾಗೂ ಭಕ್ತಾಧಿಗಳು ಭಾಗವಹಿಸಿದ್ದರು.

error: Content is protected !!