ಕಿರಾಣಿ ಅಂಗಡಿ ಮೇಲೆ ದಾಳಿ : ಮದ್ಯ ವಶ

ಕಿರಾಣಿ ಅಂಗಡಿ ಮೇಲೆ ದಾಳಿ : ಮದ್ಯ ವಶ

ಜಗಳೂರು, ಡಿ.15- ತಾಲ್ಲೂಕಿನ ಸಿದ್ದಮ್ಮನಹಳ್ಳಿ ಗ್ರಾಮದ ಮಂಜುನಾಥ್ ಎಂಬ ವ್ಯಕ್ತಿಗೆ ಸೇರಿದ ಕಿರಾಣಿ ಅಂಗಡಿ ಮೇಲೆ ಹರಿಹರ ವಲಯ ಹಾಗೂ ದಾವಣಗೆರೆ ವಲಯ 1 ಮತ್ತು 2ರ ಅಧಿಕಾರಿ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ರೂ.10,110 ಮೌಲ್ಯದ ಅಕ್ರಮ ಮಾರಾಟದ ಮದ್ಯ ವಶಪಡಿಸಿಕೊಳ್ಳಲಾಗಿದೆ.

ಜಿಲ್ಲಾ ಅಬಕಾರಿ ಉಪಾಯುಕ್ತರ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಒಂದು ಲೀಟರ್ ಸಾಮರ್ಥ್ಯದ 76 ನೀರಿನ ಬಾಟಲಿಗಳಲ್ಲಿ 76 ಲೀಟರ್ ಸೇಂದಿ, ಒರಿಜಿನಲ್ ಚಾಯ್ಸ್ ವಿಸ್ಕಿಯ 90 ಮಿಲಿಯ 48 ಟೆಟ್ರೋಪ್ಯಾಕೇಟ್ ಮತ್ತು 500 ಮಿಲಿಯ ಪವರ್ ಕೂಲ್ 6 ಟಿನ್‍ಗಳನ್ನು ಇಲಾಖೆ ವಶಕ್ಕೆ ಪಡೆದು ಆರೋಪಿಯಾದ ಮಂಜುನಾಥ್‌ನನ್ನು ನೋಟಿಸ್ ನೀಡಿ ಬಿಡುಗಡೆಗೊಳಿಸಲಾಗಿದೆ ಎಂದು ಜಿಲ್ಲಾ ಅಬಕಾರಿ ಉಪಾಯುಕ್ತರಾದ ಸ್ವಪ್ನ ಆರ್.ಎಸ್ ತಿಳಿಸಿದ್ದಾರೆ.

error: Content is protected !!