19 ರಂದು ಕದಳಿ ವೇದಿಕೆ ಸಭೆ

ದಾವಣಗೆರೆ, ಡಿ. 15-   ಕದಳಿ ಮಹಿಳಾ ವೇದಿಕೆಯಿಂದ ಇದೇ ದಿನಾಂಕ 19ರ ಮಂಗಳವಾರ ಬೆಳಿಗ್ಗೆ ನಡೆಯುವ 149ನೇ ಕಮ್ಮಟದಲ್ಲಿ ಸರ್ವ ಸದಸ್ಯರ ಸಾಮಾನ್ಯ ಸಭೆ, ದತ್ತಿ ಉಪನ್ಯಾಸ, ಶರಣ ಒಕ್ಕಲಿಗ ಮುದ್ದಣ್ಣ ಮತ್ತು ಶರಣ ಮಾದಾರ ಚೆನ್ನಯ್ಯ ಸ್ಮರಣೆ, ಗೌರವಾರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಶಾಮನೂರು ಶಿವಶಂಕರಪ್ಪ ಸಭಾಭವನದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಕದಳಿ ಮಹಿಳಾ ವೇದಿಕೆಯ ಸಲಹಾ ಸಮಿತಿಯ ಸದಸ್ಯರಾದ ಶ್ರೀಮತಿ ಉಮಾ ವೀರಭದ್ರಪ್ಪ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. 

ಲಿಂ. ಪಟೇಲ್ ಜಿ. ಜಯಪ್ಪ ಮತ್ತು ಶ್ರೀಮತಿ ಸುಂದರಮ್ಮ ಜಯಪ್ಪ ಇವರ ದತ್ತಿ ಕಾರ್ಯಕ್ರಮ ನಡೆಯಲಿದೆ. 

error: Content is protected !!