ಭೂ ತಾಯಿಯ ಋಣ ತೀರಿಸಲು ಹೋರಾಟ ಮಾಡುವುದು ಅನಿವಾರ್ಯ

ಭೂ ತಾಯಿಯ ಋಣ ತೀರಿಸಲು ಹೋರಾಟ ಮಾಡುವುದು ಅನಿವಾರ್ಯ

ದಾವಣಗೆರೆ, ಡಿ.13- ಭೂ ತಾಯಿಯ ಋಣ  ತೀರಿಸಲು ನೆಲ, ಜಲ, ಭಾಷೆಗೆ ದಕ್ಕೆ ಬಂದಾಗ ಹೋರಾಟ ಮಾಡುವುದು ಅನಿವಾರ್ಯ ಎಂದು ಕರವೇ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ತಿಳಿಸಿದರು. 

ಕರ್ನಾಟಕ ರಕ್ಷಣಾ ವೇದಿಕೆಯ ಹರಿಹರದ ನೂತನ ನಗರ ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

1999 ರಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಯು ಬೆಂಗಳೂರಿನ ಅವಿನ್ಯೂ ರಸ್ತೆಯಲ್ಲಿರುವ ಕೃಷ್ಣಯ್ಯ ಶೆಟ್ಟಿ ಶಾಲೆಯಲ್ಲಿ ಸಣ್ಣ ಪ್ರಮಾಣದಲ್ಲಿ ಪ್ರಾರಂಭವಾಗಿ, ಇಂದು ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರ ನೇತೃತ್ವದಲ್ಲಿ 70 ಲಕ್ಷ ಜನ ಸದಸ್ಯರನ್ನು ಒಳಗೊಂಡಿರುವ ಏಕೈಕ ಸಂಘಟನೆ  ಆಗಿದೆ. ನಮ್ಮ ರಾಜ್ಯದಲ್ಲಿರುವ ಕೆಲವು ಕನ್ನಡಿಗರ ಕನ್ನಡದ ಸೋಗಲಾಡಿತ ನದಿಂದ ಕನ್ನಡ ಭಾಷೆಗೆ ಕುತ್ತು ಬಂದಿದೆ, ಅಂತಹ ಕನ್ನಡಿಗರಿಗೆ  ಪ್ರತಿ ತಾಲ್ಲೂಕು, ನಗರ, ಹೋಬಳಿ,  ಗ್ರಾಮ, ಮಟ್ಟದಲ್ಲಿ ಎಚ್ಚರಿಸುವ ಸಲುವಾಗಿ ಮತ್ತು ಜಾಗೃತಿ ಮೂಡಿಸುವ ಮೂಲಕ ಕರವೇ, ಸಂಘಟನೆಯನ್ನು ಬಲಪಡಿಸಲು ಮುಂದಾಗಿದೆ. 

ಭೂತಾಯಿಯ ಋಣವನ್ನು ತೀರಿಸು ವುದು  ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾ ಗಿದೆ. ಇಲ್ಲದಿದ್ದರೆ ಅನ್ಯ ರಾಜ್ಯದವರು ನಮ್ಮ ಮೇಲೆ ದಬ್ಬಾಳಿಕೆ ನಡೆಸಲು ಮುಂದಾಗುತ್ತಾರೆ. ಅದನ್ನು ತಡೆಗಟ್ಟುವ ಸಲುವಾಗಿ ಕರವೇ ಈ ದೃಢ ನಿರ್ಧಾರ ಕೈಗೊಂಡಿದೆ. ಸಂಘಟನೆಯನ್ನು ಬಲಿಷ್ಠಗೊಳಿಸಿ ಜಾಗೃತಿ ಮೂಡಿಸುವುದು, ನಾಡು, ನುಡಿ, ಸಂಸ್ಕೃತಿ, ಸಂಸ್ಕಾರ ಕನ್ನಡಿಗರ ಬದುಕು ಕಟ್ಟುವ ನಿಟ್ಟಿನಲ್ಲಿ ಹೋರಾಟ ಮಾಡುವುದು ಕರವೇ ಮೂಲ ಉದ್ದೇಶವಾಗಿದೆ ಎಂದರು. 

ಕರವೇ ಸಂಘಟನೆ ಟಿ.ಎ. ನಾರಾಯಣ ಗೌಡರ ನೇತೃತ್ವದಲ್ಲಿ ಉದಯವಾಗಿ ನಿರಂತರ ಹೋರಾಟದಿಂದ ಬೆಂಗಳೂರಿನಲ್ಲಿ ತಮಿಳರ ಹಾವಳಿ,  ಬಳ್ಳಾರಿಯಲ್ಲಿ ತೆಲುಗರ ಹಾವಳಿ, ಬೆಳಗಾವಿಯಲ್ಲಿ ಮರಾಠಿಗರ ಹಾವಳಿ, ಕಾಸರಗೋಡಿನಲ್ಲಿ ಮಲಯಾಳಿಗಳ ಹಾವಳಿ, ದಬ್ಬಾಳಿಕೆಗಳಿಗೆ ಕಡಿವಾಣ ಹಾಕಲಾಗಿದೆ ಎಂದು ತಿಳಿಸಿದರು.  ಇತ್ತೀಚೆಗೆ ರಾಜ್ಯದಲ್ಲಿ ಉತ್ತರ ಭಾರತೀಯರ ಹಾವಳಿ ಹೆಚ್ಚಾಗುತ್ತಿದ್ದು ಅವರ ವಿರುದ್ಧ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಉಪಾಧ್ಯಕ್ಷ ನಾಗರಾಜ್ ಮೆಹರ್ವಾಡೆ, ಜಿಲ್ಲಾ ಸಂಚಾಲಕ ಎಂ.ಟಿ. ರಫೀಕ್, ನಗರ ಘಟಕದ ಉಪಾಧ್ಯಕ್ಷ ಜಿ.ಎಸ್. ಸಂತೋಷ್, ತಾಲ್ಲೂಕು ಅಧ್ಯಕ್ಷ, ರಾಜೇಶ್, ತಾಲ್ಲೂಕು ಅಧ್ಯಕ್ಷರುಗಳಾದ ರುದ್ರಗೌಡ, ಅಮಾನುಲ್ಲಾ ಖಾನ್, ಮಹಿಳಾ ತಾಲ್ಲೂಕು ಘಟಕದ ಉಪಾಧ್ಯಕ್ಷೆ ನಾಗಮ್ಮ, ನಗರ ಘಟಕ ಅಧ್ಯಕ್ಷ ಶಶಿ ನಾಯಕ್, ಛತ್ರಪತಿ. ಮೆಹಬೂಬ್‌ ಅಲಿ ಶಾರುಖ್, ಯಮನೂರು. ಮಂಜುನಾಥ್, ಇಬ್ರಾಹಿಂ ಖಲೀಲ್, ಬರ್ಕತ್ ಅಲಿ, ಜಬಿವುಲ್ಲಾ, ಜಿಕ್ರಿಯ ಅಹಮದ್, ಸಂಜಯ್ ಕುಮಾರ್, ಯುವರಾಜ್. ಕುಮಾರ್, ರಾಮಣ್ಣ, ಜಾಫರ್, ಸಾಧಿಕ್, ಮುಸ್ತಫ್, ಸೈಯದ್ ಮತ್ತಿತರು ಇದ್ದರು.

error: Content is protected !!