ದಾವಣಗೆರೆ, ಡಿ. 10 – ನಗರದ ಕೊಟ್ಟೂರು ಗುರು ಬಸವರಾಜೇಂದ್ರ ಸ್ವಾಮಿ ಪಾದಯಾತ್ರೆ ಸಮಿತಿಯಿಂದ ಮಾಗಾನಹಳ್ಳಿ ಕೋಡಿ ಕ್ಯಾಂಪ್ ಬಳಿ ಇರುವ ಶ್ರೀ ಕೊಟ್ಟೂರೇಶ್ವರ ಸ್ವಾಮಿ ಮಠದಲ್ಲಿ ನಾಡಿದ್ದು ದಿನಾಂಕ 12ರ ಮಂಗಳವಾರ ಛಟ್ಟಿ ಅಮಾ ವಾಸ್ಯೆ ಪ್ರಯುಕ್ತ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ಪಾದಗಳಿಗೆ ಅಭಿಷೇಕ – ಪೂಜೆ, ನಂತರ ಪ್ರಸಾದ ದಾಸೋಹವನ್ನು ಏರ್ಪಡಿಸಲಾಗಿದೆ. ಶ್ರೀಮತಿ ಲೀಲಾ, ಡಿ. ಕೊಟ್ರಪ್ಪ ಅವರು ಪ್ರಸಾದ ಸೇವಾಕರ್ತರಾಗಿದ್ದಾರೆ. ದಾಸೋಹ ಮನೆ ಕಟ್ಟಡಕ್ಕೆ ಭಕ್ತಾದಿಗಳು ದೇಣಿಗೆ ಸಲ್ಲಿಸಲು ಕೋರಿದೆ ಎಂದು ದೇವಸ್ಥಾನ ಸಮಿತಿಯ ಕಣಕುಪ್ಪಿ ಮುರುಗೇಶಪ್ಪ (96118 89151) ತಿಳಿಸಿದ್ದಾರೆ.
ಕೋಡಿ ಕ್ಯಾಂಪ್ ಕೊಟ್ಟೂರೇಶ್ವರ ಮಠದಲ್ಲಿ ನಾಳೆ ಛಟ್ಟಿ ಅಮಾವಾಸ್ಯೆ
![25 kodi camp 11.12.2023 ಕೋಡಿ ಕ್ಯಾಂಪ್ ಕೊಟ್ಟೂರೇಶ್ವರ ಮಠದಲ್ಲಿ ನಾಳೆ ಛಟ್ಟಿ ಅಮಾವಾಸ್ಯೆ](https://janathavani.com/wp-content/uploads/2023/12/25-kodi-camp-11.12.2023.jpg)