ಎಸ್‌. ನಿಜಲಿಂಗಪ್ಪನವರ 129ನೇ ಜನ್ಮ ದಿನಾಚರಣೆ

ಎಸ್‌. ನಿಜಲಿಂಗಪ್ಪನವರ 129ನೇ ಜನ್ಮ ದಿನಾಚರಣೆ

ದಾವಣಗೆರೆ, ಡಿ. 10 – ಮಾಜಿ ಮುಖ್ಯಮಂತ್ರಿ ಸಿದ್ದನಹಳ್ಳಿ ನಿಜಲಿಂಗಪ್ಪನವರ 129ನೇ ಹುಟ್ಟು ಹಬ್ಬದ ಪ್ರಯುಕ್ತ ವಿಧಾನಸೌಧದ ಮುಂಭಾಗದಲ್ಲಿರುವ ನಿಜಲಿಂಗಪ್ಪ ಅವರ ಪುತ್ಥಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಲಾರ್ಪಣೆ ಮಾಡಿದರು.  

ಇದೇ ಸಂದರ್ಭದಲ್ಲಿ ನಿಜಲಿಂಗಪ್ಪ ಮೊಮ್ಮಗ ಮನೋಹರ ಸಿದ್ದವ್ವಹಳ್ಳಿ ಅವರು, ದಾವಣಗೆರೆಯಲ್ಲಿ ನಿಜಲಿಂಗಪ್ಪ ಅವರು ಬಾಲ್ಯದಲ್ಲಿ ಓದಿ ಬೆಳೆದಿದ್ದಾರೆ, ಈಗಲೂ ಸಹ ಹಳೆ ದಾವಣಗೆರೆಯಲ್ಲಿ ಎಸ್ಸೆನ್ ಹಳೆ ಮನೆ ಇದ್ದು, ಇಂದಿಗೂ ನಿಜಲಿಂಗಪ್ಪನವರ ಮನೆ ಪ್ರಸಿದ್ಧ ವಾಗಿರುತ್ತದೆ. ಈ ಸಂಬಂಧವಾಗಿ ದಾವಣಗೆರೆಯಲ್ಲಿ ನಿರ್ಮಾಣವಾಗುತ್ತಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಎಸ್ಸೆನ್ ಹೆಸರನ್ನು ಇಡಬೇಕು ಎಂದು ಮನವಿಯನ್ನು ಸಲ್ಲಿಸಿದರು.

ಮನವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಕಾರಾತ್ಮಕವಾಗಿ ಸ್ಪಂದಿಸಿದರು. ಇದೇ ಸಂದರ್ಭದಲ್ಲಿ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶರಾದ ಶಿವರಾಜ್ ಪಾಟೀಲ್ ಇದ್ದರು.

error: Content is protected !!