ನಗರದಲ್ಲಿ ಇಂದು ಶ್ರೀ ಪಾಂಡುರಂಗ ವಿಠಲ ರುಖಮಾಯಿ ದಿಂಡಿ ಮಹೋತ್ಸವ

ನಗರದಲ್ಲಿ ಇಂದು ಶ್ರೀ ಪಾಂಡುರಂಗ ವಿಠಲ ರುಖಮಾಯಿ ದಿಂಡಿ ಮಹೋತ್ಸವ

ಶ್ರೀ ನಾಮದೇವ ಸಿಂಪಿ ಸಮಾಜ ಹಾಗೂ ವಿವಿಧ ಅಂಗ ಸಂಸ್ಥೆಗಳ ಸಹಯೋಗದಲ್ಲಿ   ಎಸ್‌ಕೆಪಿ ರಸ್ತೆಯಲ್ಲಿನ ಶ್ರೀ ವಿಠಲ್ ಮಂದಿರ ಹಾಗೂ ದೊಡ್ಡಪೇಟೆ ಶ್ರೀ ನಾಮದೇವ ಭಜನಾ ಮಂದಿರದಲ್ಲಿ 98 ನೇ ಶ್ರೀ ಪಾಂಡುರಂಗ ವಿಠಲ ರುಖುಮಾಯಿ ದಿಂಡಿ ಮಹೋತ್ಸವ ಕಾರ್ಯಕ್ರಮವನ್ನು ಇಂದು ಮತ್ತು ನಾಳೆ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಅಧ್ಯಕ್ಷ ಎಂ.ಎಸ್ ವಿಠಲ್ ತಿಳಿಸಿದರು.

ಇಂದು ಬೆಳಿಗ್ಗೆ 5 ಕ್ಕೆ ಕಾಕಡರಾತಿ, ಅಭಿಷೇಕ ಹಾಗೂ ಮಂಗಳಾರತಿ ನಡೆಯಲಿದೆ. ಬೆಳಿಗ್ಗೆ 9 ಕ್ಕೆ ಶ್ರೀ ಜ್ಞಾನೇಶ್ವರಿ ಸಾಮುದಾಯಿಕ ಪಾರಾಯಣ, ನಂತರ ಭಜನೆ, ಪ್ರವಚನ ನೆರವೇರಲಿದೆ. ಸಂಜೆ 5.15 ಕ್ಕೆ ಮಯೂರ ರಥದಲ್ಲಿ ಶ್ರೀ ವಿಠಲ ರುಖುಮಾಯಿ ಉತ್ಸವ ಪ್ರಮುಖ ಬೀದಿಗಳಲ್ಲಿ ಜರುಗಲಿದೆ.

error: Content is protected !!